‘ಮುಖ್ಯಮಂತ್ರಿ ಮನೆವರೆಗೆ ಪಾದಯಾತ್ರೆ ಹೋಗುತ್ತಿದ್ದೇನೆ. ಇದು ನನ್ನೊಬ್ಬನ ಪಾದಯಾತ್ರೆಯಲ್ಲ. ನಾಲ್ಕು ನಿಗಮಗಳ 1.30 ಲಕ್ಷ ನೌಕರರ ಪಾದಯಾತ್ರೆ. ದಯವಿಟ್ಟು ಸಹಕರಿಸಿ. ಸರ್ಕಾರಕ್ಕೆ, ನಮ್ಮ ಸಮಸ್ಯೆ ಮನದಟ್ಟಾಗಬೇಕು. ಹೀಗೆಯೇ ಬಿಟ್ಟರೆ ತಾರತಮ್ಯ ಮಾಡುತ್ತಾರೆ. ಈ ಹೋರಾಟ ಯಶಸ್ವಿಯಾಗಬೇಕು. ಮುಷ್ಕರವನ್ನು ಹೀಗೆಯೇ ಮುಂದುವರೆಸೋಣ. ಕಾರ್ಮಿಕರು ಈ ವಿಡಿಯೊ ಶೇರ್ ಮಾಡಬೇಕು’ ಎಂದು ಮನವಿ ಮಾಡಿದ್ದಾರೆ.