ಬೆಳಿಗ್ಗೆ 8 ಗಂಟೆ ಸುಮಾರಿಗೆ ದಸರಾ ಆನೆಗಳಾದ ಅರ್ಜುನ, ಅಭಿಮನ್ಯು, ಭೀಮ, ಗಣೇಶ, ಮಹೇಂದ್ರ ಇವುಗಳಿಗೆ ವಡೂರು ಆನೆ ಕ್ಯಾಂಪ್ನಲ್ಲಿ ಪೂಜೆ ಸಲ್ಲಿಸಿ ಕಾರ್ಯಾಚರಣೆ ಶುರು ಮಾಡಿದರು. 8.30 ರ ಸುಮಾರಿಗೆ ಹಳೆಕೆರೆ ಗ್ರಾಮದ ತೋಟದಲ್ಲಿ ಮೌಂಟೈನ್ ಒಂಟಿ ಸಲಗ ಪತ್ತೆಯಾಯಿತು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ ಕೆ.ಎನ್. ಬಸವರಾಜು ನೇತೃತ್ವದಲ್ಲಿ ದಲಾಯತ್ ಅಕ್ರಂ, ಡಾ.ಮುಜೀಬ್, ಡಾ.ಮುರುಳಿ, ಡಾ.ಆಶೀಸ್ ಅರವಳಿಕೆ ಚುಚ್ಚುಮದ್ದು ಪ್ರಯೋಗಿಸುವಲ್ಲಿ ಯಶಸ್ವಿಯಾದರು.