ಉಚ್ಚಾಟಿತ ಕಾರ್ಯಕರ್ತರು ಪ್ರವಾಸಿ ಮಂದಿರದಲ್ಲಿ ಸೇರಿ ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದರಲ್ಲದೆ, ಕೆಲ ಮುಖಂಡರ ಪ್ರತಿಕೃತಿ ದಹಿಸಲು ಉದ್ದೇಶಿಸಿದ್ದರು. ಇನ್ನೇನು ಪ್ರತಿಭಟನೆ ಆರಂಭಿಸಬೇಕು ಎನ್ನುವ ವೇಳೆಗೆ ಅಲ್ಲಿಗೆ ಬಂದ ಮತ್ತೊಂದು ಬಣದ ಕಾರ್ಯಕರ್ತರು ಪ್ರತಿಭಟನೆ ಏಕೆ ನಡೆಸುತ್ತಿದ್ದೀರಾ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆಯಿತಲ್ಲದೆ, ಕೈ ಕೈ ಮಿಲಾಯಿಸಿದರು.