‘ಪುತ್ತೂರಿನಲ್ಲಿ ಜ್ಯೋತಿಷಿ ವೃತ್ತಿ ನಡೆಸುತ್ತಿರುವ ಈತ, ತವರಿನಿಂದ ಹಣ ತರುವಂತೆ ಹಿಂಸೆ ಕೊಡುತ್ತಿದ್ದ. ಮಗುವಾದರೂ ಹಿಂಸೆ ಕೊಡುವುದು ನಿಲ್ಲಿಸಲಿಲ್ಲ. ಕಿರುಕುಳ ತಾಳಲಾರದೆ, ಹಲವು ಬಾರಿ ತವರು ಮನೆಗೆ ಹೋಗಿದ್ದೆ. ಮುಂದೆ ಚೆನ್ನಾಗಿ ನೋಡಿಕೊಳ್ಳುವೆ ಎಂದು ಮನವೊಲಿಸಿ ತನ್ನ ಮನೆಗೆ ಕರೆದುಕೊಂಡು ಹೋಗಿ ಮನೆಯವರೊಂದಿಗೆ ಸೇರಿಕೊಂಡು ನನಗೆ ಮತ್ತು ಮಗುವಿಗೆ ಚಿತ್ರಹಿಂಸೆ ನೀಡಿದ್ದಾರೆ’ ಎಂದು ಸೌಂದರ್ಯ ಆರೋಪಿಸಿದರು.