ಸಂಪ್ರದಾಯ ಪ್ರಕಾರವಾಗಿ ನಗರದ ಪ್ರಮುಖ ದೇವಾಲಯಗಳಾದ ಆಂಜನೇಯ, ಸಿದ್ಧೇಶ್ವರ, ಶನೇಶ್ಚರ, ಮೈಲಾರಲಿಂಗೇಶ್ವರ ಹಾಗೂ ಚನ್ನಕೇಶವ ದೇವರ ಉತ್ಸವ ಮೂರ್ತಿಗಳನ್ನು ಹಾಸನಾಂಬ ದೇವಾಲಯದ ಆವರಣಕ್ಕೆ ತಂದು ಪೂಜಿಸಲಾಯಿತು. ಕೋವಿಡ್ ಕಾರಣದಿಂದ ಹಾಸನಾಂಬ ದೇವಸ್ಥಾನದಿಂದ ಉತ್ಸವ ಮೂರ್ತಿಗಳನ್ನು ಟ್ಯ್ರಾಕ್ಟರರ್ ಮೇಲಿರಿಸಿ ಸಾಲಗಾಮೆ ರಸ್ತೆಯ ಬನ್ನಿ ಮಂಟಪಕ್ಕೆ ತರಲಾಯಿತು.