ಸಗರ ಹೊರವಲಯದ ಕೆರೆ ಕೋಡಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 206ರ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಳದಲ್ಲಿ ಮಂಗಳವಾರ ನಡೆದ ಪ್ರತಿಭಟನೆ ನೇತೃತ್ವ ವಹಿಸಿದ್ದ ಕೆಲ್ಲೆಂಗೆರೆ ಕುಮಾರ್ ಮಾತನಾಡಿ, ‘ಈಗ ರಾಷ್ಟ್ರೀಯ ಹೆದ್ದಾರಿ 206ರ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ನಗರ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ಪೂರ್ವಜರ ಕಾಲದ ರಸ್ತೆಯನ್ನು ಮುಚ್ಚುವುದರಿಂದ ಕೆಲ್ಲೆಂಗೆರೆ, ಚಲ್ಲಾಪುರ, ಗೊಲ್ಲರಹಟ್ಟಿ, ಈಡಿಗರ ಹಟ್ಟಿ, ಅಜ್ಜನಹಳ್ಳಿ, ತಿಪ್ಪನಹಳ್ಳಿ, ನಾಗೇನಹಳ್ಳಿ, ಕುಣಗಟ್ಟೇಹಳ್ಳಿ, ಹೊನ್ನೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಜನರಿಗೆ ಸಂಚರಿಸಲು ರಸ್ತೆ ಇಲ್ಲದಂತಾಗುತ್ತದೆ’ ಎಂದರು.