‘ಸಿದ್ದರಾಮಯ್ಯ ಆಗಲೀ, ಯಡಿಯೂರಪ್ಪ ಆಗಲೀ, ಅವರ ಮನೆಗೆ ನಾನೇನು ನೆಂಟಸ್ತಿಕೆ ಮಾಡೋಕೆ ಹೋಗ್ಬೇಕಿತ್ತಾ?ಆದರೆ, ನನ್ನ ಹೇಳಿಕೆಯನ್ನು ಮಾಧ್ಯಮಗಳಲ್ಲಿ ಬೇರೆ ರೀತಿ ಬಿಂಬಿಸಲಾಗುತ್ತಿದೆ. ಮಾಧ್ಯಮಗಳಿಗೆ ಒಂದು ಸಾಮಾನ್ಯ ಜ್ಞಾನ ಬೇಡವೆ’ ಎಂದು ಸಿಟ್ಟಿನಿಂದಲೇ ಪ್ರಶ್ನಿಸಿದ ಗೌಡರು,‘ನಾನು ಹೋರಾಟದಿಂದ ಬಂದವನು. ಹೋರಾಟ ಮಾಡೋದು ನನಗೆ ಗೊತ್ತಿದೆ’ ಎಂದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.