ನನೆಗುದಿಗೆ ಬಿದ್ದಿರುವ ಅರಣ್ಯ ವಿಸ್ತರಣೆ: ‘ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿರುವ ಅರಣಿ, ಮಂಕನಹಳ್ಳಿ, ಬೋರನಮನೆ, ಎತ್ತಳ್ಳ, ಬಟ್ಟೆಕುಮರಿ, ಬಾಜೆಮನೆ ಎಸ್ಟೇಟ್, ಬಾಳೇಹಳ್ಳಿ, ಯಡಕುಮೇರಿ ಈ ಗ್ರಾಮಗಳಲ್ಲಿ ಸುಮಾರು 3 ಸಾವಿರ ಎಕರೆ ಹಿಡುವಳಿ ಭೂಮಿಯನ್ನು ಅರಣ್ಯ ವಿಸ್ತರಣೆಗಾಗಿ ಸರ್ಕಾರಕ್ಕೆ ಬಿಟ್ಟು ಕೊಡಲು ಗ್ರಾಮಸ್ಥರೇ ಮುಂದೆ ಬಂದಿದ್ದೇವೆ. 3 ಸಾವಿರ ಹಿಡುವಳಿ ಸೇರಿದಂತೆ ಸುಮಾರು 15 ಸಾವಿರ ಎಕರೆ ಭೂಮಿ ಬಿಸಿಲೆ, ಕಾಗಿನಹರೆ ಹಾಗೂ ಕೆಂಚನಕುಮರಿ ರಕ್ಷಿತ ಅರಣ್ಯ ವಿಸ್ತರಣೆಗೆ ಸೇರುತ್ತದೆ. ಈ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿ, ಮುಖ್ಯಮಂತ್ರಿಗಳು ₹ 150 ಕೋಟಿ ಬಿಡುಗಡೆ ಮಾಡಿದ್ದಾರೆ.