ಹಳೇಬೀಡು: ಸ್ಕೂಟರ್ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಹುಲ್ಲೇನಹಳ್ಳಿ ಗ್ರಾಮದ ಪವಿತ್ರ(19) ಸ್ಥಳದಲ್ಲಿ ಮೃತಪಟ್ಟ ಘಟನೆ ಬೇಲೂರು ರಸ್ತೆಯ ನೋಗದ ತಿರುವಿನಲ್ಲಿ ಸೋಮವಾರ ಸಂಜೆ ನಡೆದಿದೆ.
ಈಕೆ ಹಳೇಬೀಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ಓದುತ್ತಿದ್ದರು. ಹಿಂಬದಿಯಲ್ಲಿ ಕುಳಿತಿದ್ದ ರಾಜನಶಿರಿಯೂರು ಗ್ರಾಮದ ಶೀಲಾ(42) ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದಾರೆ.
ಪವಿತ್ರ ಹೆಬ್ಬಾಳು ಬಳಿಯ ಜೋಗಿಹಳ್ಳಿಯ ಅಜ್ಜಿ ಮನೆಗೆ ಹೋಗಿದ್ದರು. ಜೋಗಿಹಳ್ಳಿಯಿಂದ ತಾಯಿಯ ಸಹೋದರಿ ಶೀಲಾ ಅವರನ್ನು ರಾಜನಶಿರಿಯೂರು ಬಿಡಲು ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಸ್ಕೂಟರ್ಗೆ ಡಿಕ್ಕಿ ಹೊಡೆದ ವಾಹನ ಪರಾರಿಯಾಗಿದೆ. ಹಳೇಬೀಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.