ಇದಕ್ಕೆ ಪ್ರತಿಕ್ರಿಯಿಸಿದ ಅರ್ಚಕ ನಾಗರಾಜ್, ‘ಅರ್ಚಕರು ಯಾರೂ ಇಲ್ಲಿ ಪವಾಡಗಳು ನಡೆಯುತ್ತಿದೆ ಎಂದು ಪ್ರಚಾರ ಮಾಡಿಲ್ಲ. ಯಾವ ಗ್ರಂಥದಲ್ಲಿಯೂ ಆ ಬಗ್ಗೆ ಉಲ್ಲೇಖವಿಲ್ಲ. ಯಾರೋ ಸೃಷ್ಟಿಸಿದ ಪವಾಡದ ಕತೆಗಳನ್ನೇ ಎಲ್ಲರೂ ಹೇಳುತ್ತಿದ್ದಾರೆ. ಒಂದು ವರ್ಷ ದೀಪ ಆರುವುದಿಲ್ಲ, ದೇವಿ ಮೇಲಿರಿಸಿದ ಹೂವು ಬಾಡುವುದಿಲ್ಲ, ಎಡೆ ಮಾಡಿದ ಅನ್ನ ಹಳಸುವುದಿಲ್ಲವೆಂದು ಭಕ್ತರು ನಂಬಿದ್ದಾರೆ’ ಎಂದು ವಿವರಿಸಿದರು.