ಹಾವೇರಿ: ಹಾನಗಲ್ ಘಟಕದ ಬಸ್ನಲ್ಲಿ ಬಿಟ್ಟುಹೋದ ₹1.50 ಲಕ್ಷ ಮೊತ್ತದ 25 ಗ್ರಾಂ ಬಂಗಾರವನ್ನು ಪ್ರಯಾಣಿಕರಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಬಸ್ ಚಾಲಕ ಎಸ್.ಎಂ. ಬೋಡಕ್ಕೆ ಹಾಗೂ ನಿರ್ವಾಹಕ ರಾಮಚಂದ್ರ ಲಮಾಣಿ ಅವರನ್ನು ಸನ್ಮಾನಿಸಲಾಯಿತು.
ಹಾವೇರಿ ನಗರದ ವಿಭಾಗೀಯ ಕಚೇರಿಯಲ್ಲಿ ಶನಿವಾರ ಬಂಗಾರದ ಮಾಲೀಕರಾದ ಸಲೀಮಾ ಅಕ್ಬರಸಾಬ ಕಲಕೇರಿ, ಅಕ್ಬರಸಾಬ್ ಕಲಕೇರಿ ಹಾಗೂ ಜಾಫರ್ ಖಾನ್ ಮಹೆಬೂಬ ಅಲೀಖಾನ್ ಅವರಿಗೆ ಬಂಗಾರ ಮರಳಿಸಲಾಯಿತು.
ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಆರ್.ಪಾಟೀಲ, ತಾಂತ್ರಿಕ ಶಿಲ್ಪಿ ಅಶ್ರಫ್ ಅಲಿ, ಆಡಳಿತಾಧಿಕಾರಿ ಜೆ.ಬಿ.ದಿವಾಕರ, ವಿಭಾಗೀಯ ಭದ್ರತಾ ಅಧೀಕ್ಷಕ ಎಚ್.ಡಿ.ತೋಗಣಸಿ, ಸಹಾಯಕ ಲೆಕ್ಕಾಧಿಕಾರಿ ಕೃಷ್ಣ ರಾಹುತನಕಟ್ಟಿ ಹಾಗೂ ಸಹಾಯಕ ಉಗ್ರಾಣಧಿಕಾರಿ ಆರ್.ಕೇಶವಮೂರ್ತಿ ಇದ್ದರು.