ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1.50 ಲಕ್ಷ ಮೊತ್ತದ ಬಂಗಾರವನ್ನು ಪ್ರಯಾಣಿಕರಿಗೆ ಮರಳಿಸಿದ ಸಾರಿಗೆ ಸಿಬ್ಬಂದಿ

Last Updated 4 ಫೆಬ್ರುವರಿ 2023, 16:00 IST
ಅಕ್ಷರ ಗಾತ್ರ

ಹಾವೇರಿ: ಹಾನಗಲ್ ಘಟಕದ ಬಸ್‍ನಲ್ಲಿ ಬಿಟ್ಟುಹೋದ ₹1.50 ಲಕ್ಷ ಮೊತ್ತದ 25 ಗ್ರಾಂ ಬಂಗಾರವನ್ನು ಪ್ರಯಾಣಿಕರಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಬಸ್ ಚಾಲಕ ಎಸ್.ಎಂ. ಬೋಡಕ್ಕೆ ಹಾಗೂ ನಿರ್ವಾಹಕ ರಾಮಚಂದ್ರ ಲಮಾಣಿ ಅವರನ್ನು ಸನ್ಮಾನಿಸಲಾಯಿತು.

ಹಾವೇರಿ ನಗರದ ವಿಭಾಗೀಯ ಕಚೇರಿಯಲ್ಲಿ ಶನಿವಾರ ಬಂಗಾರದ ಮಾಲೀಕರಾದ ಸಲೀಮಾ ಅಕ್ಬರಸಾಬ ಕಲಕೇರಿ, ಅಕ್ಬರಸಾಬ್‌ ಕಲಕೇರಿ ಹಾಗೂ ಜಾಫರ್‌ ಖಾನ್ ಮಹೆಬೂಬ ಅಲೀಖಾನ್ ಅವರಿಗೆ ಬಂಗಾರ ಮರಳಿಸಲಾಯಿತು.

ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಆರ್.ಪಾಟೀಲ, ತಾಂತ್ರಿಕ ಶಿಲ್ಪಿ ಅಶ್ರಫ್ ಅಲಿ, ಆಡಳಿತಾಧಿಕಾರಿ ಜೆ.ಬಿ.ದಿವಾಕರ, ವಿಭಾಗೀಯ ಭದ್ರತಾ ಅಧೀಕ್ಷಕ ಎಚ್.ಡಿ.ತೋಗಣಸಿ, ಸಹಾಯಕ ಲೆಕ್ಕಾಧಿಕಾರಿ ಕೃಷ್ಣ ರಾಹುತನಕಟ್ಟಿ ಹಾಗೂ ಸಹಾಯಕ ಉಗ್ರಾಣಧಿಕಾರಿ ಆರ್.ಕೇಶವಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT