ರೈತ ಸುಬ್ಬರಾವ್ ಅನಂತರಾವ್ ದೈವಜ್ಞ ಅವರ ಮಗ ನಾಗರಾಜ ಸುಬ್ಬರಾವ್ ದೈವಜ್ಞ ಅವರು ತಮ್ಮ ಹೊದಲ್ಲಿ ಹಾದು ಹೋಗಿರುವ 11 ಕೆ.ವಿ. ವಿದ್ಯುತ್ ತಂತಿ ಸಡಿಲವಾಗಿದ್ದು, ಒಂದಕ್ಕೊಂದು ಸ್ಪರ್ಶಿಸಿ ಬೆಂಕಿ ಹತ್ತುವ ಹಾಗೂ ಲೈನ್ ಕಟ್ ಆಗುವ ಸಂಭವವಿತ್ತು. ಈ ಬಗ್ಗೆ ತಂತಿಗಳನ್ನು ಸರಿಪಡಿಸುವಂತೆ ಆಡೂರು ಹಾಗೂ ಹಾನಗಲ್ ಹೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗದ ಕಚೇರಿ ಅಧಿಕಾರಿಗಳನ್ನು ವಿನಂತಿಸಿಕೊಂಡಿದ್ದರು.