ಹಾವೇರಿ: ‘ಶೇ 40ರಷ್ಟು ಕಮಿಷನ್ ಕೊಟ್ಟು ಯಾರು ಕೆಲಸ ಮಾಡೋಕೆ ಆಗುತ್ತೆ? ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕೆಲವರು ಒಳಸಂಚು ಮಾಡಿದ್ದಾರೆ. ಗುತ್ತಿಗೆದಾರ ಸಂತೋಷ್ ಪಾಟೀಲ ಅವರಾಗಿಯೇ ಸತ್ತಿಲ್ಲ, ಆತ್ಮಹತ್ಯೆಗೆ ಪ್ರಚೋದನೆ ಕೊಟ್ಟು ಮಾಡಿಸಿದ್ದಾರೆ’ ಎಂದು ತೋಟಗಾರಿಕಾ ಸಚಿವ ಮುನಿರತ್ನ ಅವರು ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದರು.