ಆಹಾರ ಸೇವಿಸಿದವರ ಪೈಕಿ ಅಸ್ವಸ್ಥಗೊಂಡವರಲ್ಲಿ 53 ಜನರು ಚೇತರಿಸಿಕೊಂಡಿದ್ದಾರೆ. 26 ಜನರನ್ನು ಮಾಸೂರು ಗ್ರಾಮದ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 7 ಜನರನ್ನು ಹಿರೇಕೆರೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಝಡ್.ಆರ್.ಮಕಾನದಾರ್ ತಿಳಿಸಿದ್ದಾರೆ.