ಹಾವೇರಿ: ‘ಕೆಲವರು ಹೀಗೂ ಇರುತ್ತಾರೆ, ಮಾತಾಡೋದೇ ಅವರ ಕೆಲಸ. ಇದು ಅವರ ಹವ್ಯಾಸ. ಪಕ್ಷದಿಂದ ಈಗಾಗಲೇ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ನೋಟಿಸ್ ಜಾರಿಯಾಗಿದೆ. ಆದ್ರೆ ಕಲಿಯುವುದಿಲ್ಲ, ತಿಳಿದುಕೊಳ್ಳಲ್ಲ ಅಂದ್ರೆ ಏನು ಮಾಡೋದು? ಬಿಜೆಪಿ ಕಾರ್ಯಕರ್ತರು ಇದನ್ನ ಇಷ್ಟಪಡಲ್ಲ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ಸಿಂಗ್ ಅಸಮಾಧಾನ ವ್ಯಕ್ತಪಡಿಸಿದರು.