ಹಾವೇರಿ: ನಗರದ ಆಯುರ್ವೇದಿಕ್ ವೈದ್ಯ ಶರಣು ಅಂಗಡಿ ಎಂಬಾತ, ವೈದ್ಯರ ವಾಟ್ಸ್ಆ್ಯಪ್ ಗ್ರೂಪ್ವೊಂದರಲ್ಲಿ ಹಾವೇರಿಯಲ್ಲಿ ಕೊರೊನಾ ಪ್ರಕರಣವೊಂದು ಖಚಿತವಾಗಿದೆ ಎಂದು ಪೋಸ್ಟ್ ಹಾಕಿದ್ದ.
ಈತನನ್ನು ಶಾಸಕ ನೆಹರು ಓಲೇಕಾರ ಮತ್ತು ಡಿಎಚ್ಒ ಅವರು ನಗರದ ಪ್ರವಾಸಿ ಮಂದಿರಕ್ಕೆ ಶನಿವಾರ ಕರೆಸಿ, ವಿಚಾರಿಸಿದರು. ಆತ ‘ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಲಿ ಎಂಬ ಉದ್ದೇಶದಿಂದ ಆ ಪೋಸ್ಟ್ ಅನ್ನು ಫಾರ್ವರ್ಡ್ ಮಾಡಿದ್ದೇನೆ. ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ’ ಎಂದು ಗೋಗರೆದ.
ಈ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳಲು ಕೋರಿದ್ದೇನೆ ಎಂದು ಡಿಎಚ್ಒ ರಾಜೇಂದ್ರ ದೊಡ್ಡಮನಿ ‘ಪ್ರಜಾವಾಣಿ’ಗೆ ತಿಳಿಸಿದರು.