ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ‘ಜಗತ್ತಿನ ಸಾಮಾಜಿಕ ಕ್ರಾಂತಿಯ ಇತಿಹಾಸದಲ್ಲಿ ಹನ್ನೆರಡನೆಯ ಶತಮಾನ ಪ್ರಮುಖ ಘಟ್ಟ.ಅಂದು ಕಲ್ಯಾಣದಲ್ಲಿ ಲೋಕಕಲ್ಯಾಣ ಬಯಸಿ ಬಂದವರಿಗೆಲ್ಲಾ ಬದುಕಿನ ನೆಲೆ ಮತ್ತು ಬೆಲೆಗಳನ್ನು ಅವರವರ ಬದುಕಿನ ಮೂಲಗಳಿಂದಲೇ ಒದಗಿಸಿ, ಶುದ್ಧ ಜೀವನ ದರ್ಶನವನ್ನು ಮೆರೆದ ಪರ್ವವದು. ಕಾರ್ತೀಕ ಕತ್ತಲಲ್ಲಿ ಆಕಾಶ ದೀಪವಾಗಿ ನೀ ಬಂದೆ ಬಸವಣ್ಣ ಎಂದು ರಾಷ್ಟ್ರಕವಿ ಕುವೆಂಪು ಹೇಳಿರುವುದು ಅರ್ಥಪೂರ್ಣ ಮಾತುಗಳು ಎಂದು ಹೇಳಿದರು.