‘ಆಪ್ತ ಸಮಾಲೋಚನೆ ಮಾಡಿದಾಗ ಬಾಲಕ ಆರಂಭದಲ್ಲಿ ಏನನ್ನೂ ಹೇಳಲಿಲ್ಲ. ಸೂಕ್ಷ್ಮವಾಗಿ ಮಾತನಾಡಿಸಿ ಮನಪರಿವರ್ತನೆ ಮಾಡಿಸಿದಾಗ, ‘ನಾನು ನ್ಯಾಮತಿಯವನು. ಮಾನಸಿಕವಾಗಿ ನೊಂದಿದ್ದು, ಪೋಷಕರನ್ನು ತೊರೆದು ಇಲ್ಲಿಗೆ ಬಂದಿದ್ದೆ’ ಎಂದು ಹೇಳಿಕೆ ಕೊಟ್ಟ. ಸದ್ಯ ಆತನಿಗೆ ಶ್ರೀ ಶಕ್ತಿ ಮಕ್ಕಳ ಆಶ್ರಮದಲ್ಲಿ ಉಳಿಸಿಕೊಂಡಿದ್ದೇವೆ’ ಎಂದು ಸಮಿತಿ ಅಧ್ಯಕ್ಷ ಎಸ್.ಎಚ್.ಮಜೀದ್ ಹೇಳಿದರು.