ಭಜನಾ ಪದಗಳು ಕೇವಲ ಮನರಂಜನೆಗೆ ಅಷ್ಟೇ ಅಲ್ಲದೇ ವಿವಿಧ ಮಹಾನ ದಾರ್ಶನಿಕರ ಜೀವನದ ಚರಿತ್ರೆ, ಪುರಾಣಗಳು, ರಾಮಾಯಣ, ಮಹಾಭಾರತಗಳಂತಹ ಕಥೆಗಳನ್ನು ಅರಿತುಕೊಂಡು ಭಜನೆಗಳ ಮೂಲಕ ಜನಸಾಮಾನ್ಯರಿಗೆ ತಿಳಿಸುವಂತಹ ಪ್ರಯತ್ನವನ್ನು ಭಜನಾ ಪದಗಳು ಮಾಡುತ್ತಿವೆ. ಪ್ರಸ್ತುತ ದಿನಗಳಲ್ಲಿ ಯುವಕರು ದುಶ್ಚಟಗಳಿಂದ ದೂರವಿದ್ದು ಭಜನಾ ಪದಗಳನ್ನು ಹವ್ಯಾಸವಾಗಿ ಬೆಳೆಸಿಕೊಂಡು ಕರಗತ ಮಾಡಿಕೊಳ್ಳಬೇಕು. ಜಾನಪದ ಜಾತ್ರೆಗಳ ಹಬ್ಬ ಆಚರಣೆ ಮಾಡುವ ಮೂಲಕ ಮೂಲ ಜನಪದ ಕಲೆಗೆ ಪ್ರೋತ್ಸಾಹ ನೀಡುತ್ತಿರುವ ಸರ್ಕಾರದ ಕೆಲಸ ಶ್ಲಾಘನೀಯ ಎಂದರು.