ಹಾವೇರಿ: ಪಕ್ಷ ಆಯೋಜಿಸಿದ್ದ ಪರಿಶಿಷ್ಟ ಜಾತಿಯ ಸಮಾವೇಶಕ್ಕಾಗಿ ಹಾವನೂರ ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಸಾರ್ವಜನಿಕರನ್ನು ಕರೆತರುವ ವಾಹನದ ವ್ಯವಸ್ಥೆಗಾಗಿ ನಿಂಗಪ್ಪ ಮೈಲಾರ ₹ 50 ಸಾವಿರ ಖರ್ಚು ಮಾಡಿದ್ದು, ಆ ಹಣವನ್ನು ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ಗ್ರಾಮೀಣ ಘಟಕದ ಅಧ್ಯಕ್ಷ ಮುತ್ತಯ್ಯ ಕಿತ್ತೂರಮಠ ಹಾಗೂ ನಗರ ಘಟಕದ ಅಧ್ಯಕ್ಷ ನಿರಂಜನ ಹೇರೂರ ಇತರ ಹಣ ಹಂಚಿಕೆ ಸಂದರ್ಭದಲ್ಲಿ ಸಂದಾಯ ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕ ಪ್ರಕಟಣೆ ತಿಳಿಸಿದೆ.