ಬದಾಮಿ, ಸಿಂಧೂರ, ರಸಪೂರಿ, ತೋತಾಪುರಿ ಹಾಗೂ ನಾಟಿ ಮಾವಿನ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. “ಹಣ್ಣುಗಳ ರಾಜ” ಎಂದು ಹೆಸರು ಪಡೆದುಕೊಂಡಿರುವ ಮಾವು ಈಗಾಗಲೇ ಗಿಡದಲ್ಲಿ ತುಂಬಿ ತುಳುಕಬೇಕಾಗಿದ್ದ ಮಾವಿನ ಕಾಯಿಗಳು ಹವಾಮಾನ ವೈಪರೀತ್ಯಕ್ಕೆ ತುತ್ತಾಗಿವೆ. ಗಜೇಂದ್ರಗಡ, ಗೋಗೇರಿ, ನೆಲ್ಲೂರ, ಕಣವಿ, ಕಾಲಕಾಲೇಶ್ವರ, ದಿಂಡೂರ, ಮಾಡಲಗೇರಿ, ನೈನಾಪುರ, ಹಿರೇಹಾಳ, ಲಕ್ಕಲಕಟ್ಟಿ ಸೇರಿದಂತೆ ಇತರ ಗ್ರಾಮಗಳಲ್ಲಿನ ತೋಟ ಮತ್ತು ಹೊಲಗಳಲ್ಲಿ ಮಾವು ಬೆಳೆಯಲಾಗುತ್ತಿದೆ. ವರ್ಷಕ್ಕೆ ಒಂದೇ ಫಲ ನೀಡುವ ಮಾವಿನ ಫಸಲು ಸಮರ್ಪಕವಾಗಿ ಬರದೆ ಬೆಳೆಗಾರರಿಗೆ ಬಲವಾದ ಪೆಟ್ಟು ನೀಡಿದೆ.