ಸಾರಿಗೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದ ಕಾರಣ, ಮುಷ್ಕರದ ನಡುವೆಯೂ ನಗರ ಮತ್ತು ಪಟ್ಟಣಗಳಿಗೆ ಬಂದ ಸಾರ್ವಜನಿಕರು ಊರುಗಳಿಗೆ ತೆರಳಲು ವಾಹನ ಸೌಲಭ್ಯವಿಲ್ಲದೆ ಪರದಾಡಿದರು. ಮ್ಯಾಕ್ಸಿಕ್ಯಾಬ್ಗಳು ಬಸ್ ದರಕ್ಕಿಂತ ದುಬಾರಿ ದರವನ್ನು ನಿಗದಿಪಡಿಸಿದ್ದವು. ಪ್ರಯಾಣಿಕರು ಅನಿವಾರ್ಯವಾಗಿ ದುಪ್ಪಟ್ಟು ಹಣ ತೆತ್ತು ದಾವಣಗೆರೆ, ಹುಬ್ಬಳ್ಳಿ, ಗದಗ, ಶಿರಸಿ ಕಡೆಯತ್ತ ಸಂಚರಿಸಿದರು.