<p>ಬ್ಯಾಡಗಿ: ಪಟ್ಟಣದ ಮುಖ್ಯ ರಸ್ತೆಯ ಮೂಲಕ ಹಾಯ್ದು ಹೋಗಿರುವ ಸೊರಬ–ಗಜೇಂದ್ರಗಡ ರಾಜ್ಯ ಹೆದ್ದಾರಿ ವಿಸ್ತರಣಾ ಕಾರ್ಯಾಚರಣೆ ಭಾನುವಾರವೂ ಮುಂದುವರಿದಿದೆ. ಪರಿಹಾರದ ಹಣ ಪಡೆದ ಭೂಮಾಲೀಕರ ಒಟ್ಟಾರೆ 108 ಕಟ್ಟಡಗಳ ಪೈಕಿ 62 ಕಟ್ಟಡಗಳನ್ನು ತೆರವುಗೊಳಿಸಲಾಗಿದೆ.</p>.<p>ಇನ್ನೂ 23 ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಕೆಲ ಕಟ್ಟಡ ಮಾಲೀಕರೊಂದಿಗೆ ನಡೆದ ವಾದವಿವಾದಗಳ ಹೊರತುಪಡಿಸಿ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ, ಸ್ವಯಂ ಪ್ರೇರಣೆಯಿಂದ ಕಟ್ಟಡ ಮಾಲೀಕರು ಅಂಗಡಿಗಳಲ್ಲಿರುವ ವಸ್ತುಗಳನ್ನು ತೆರವುಗೊಳಿಸುತ್ತಿರುವುದು ಕಂಡು ಬಂದಿತು.</p>.<p>ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಬೆಳಿಗ್ಗೆಯಿಂದ ಪಟ್ಟಣದಲ್ಲಿ ಬೀಡು ಬಿಟ್ಟಿದ್ದು, ಕಟ್ಟಡವನ್ನು ತೆರವುಗೊಳಿಸಲು ಸಹಕಾರ ನೀಡುವಂತೆ ಮಾಲೀಕರಲ್ಲಿ ಮನವಿ ಮಾಡಿಕೊಂಡರು. ಹಳೆ ಪುರಸಭೆಯಿಂದ ಗುಮ್ಮನಹಳ್ಳಿ ರಸ್ತೆಯವರೆಗಿನ ಎರಡೂ ಬದಿಗೂ ಇರುವ ಕಟ್ಟಡಗಳ ತೆರವು ಕಾರ್ಯ ಮುಂದುವರಿದಿದೆ. ಸುಮಾರು 6ಕ್ಕೂ ಹೆಚ್ಚು ಜೆಸಿಬಿಗಳು ಸದ್ದು ಮಾಡುತ್ತಿವೆ. ಮಣ್ಣಿನ ಮಾಳಿಗೆಯ ಕಟ್ಟಡವಾಗಿದ್ದರಿಂದ ದೂಳು ಹೆಚ್ಚು ಆವರಿಸಿರುವುದು ಕಂಡು ಬಂದಿತು.</p>.<p>ತಿಳುವಳಿಕೆ ಪತ್ರ: ಪರಿಹಾರದ ಹಣವನ್ನು ಜಿಲ್ಲಾ ನ್ಯಾಯಾಲಯದಲ್ಲಿ ಜಮಾ ಮಾಡಬೇಕಾದ ಹಿನ್ನೆಲೆಯಲ್ಲಿ ಪರಿಹಾರದ ಹಣ ಪಡೆಯದ ಕಟ್ಟಡ ಮಾಲೀಕರಿಗೆ ಸಿಬ್ಬಂದಿ ಮೂಲಕ ಕಟ್ಟಡ ತೆರವುಗೊಳಿಸಿಕೊಳ್ಳುವಂತೆ ತಿಳಿವಳಿಕೆ ಪತ್ರಗಳನ್ನು ನೀಡಲಾಯಿತು. ಕೆಲ ಭೂಮಾಲೀಕರು ರಜೆಯ ದಿನದಂದು ಏಕೆ ತಿಳುವಳಿಕೆ ಪತ್ರ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಸೊಪ್ಪು ಹಾಕದ ಜಿಲ್ಲಾಡಳಿತ ತಿಳಿವಳಿಕೆ ಪತ್ರ ನೀಡಿದರು. ಬಾಡಿಗೆ ಅಂಗಡಿ ಹುಡುಕಿಕೊಳ್ಳುವವರೆಗೂ ನಮಗೆ ಕಾಲಾವಕಾಶ ಕೊಡಿ ಸರ್ ಎಂದು ಕೆಲ ವರ್ತಕರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು. ಆದರೆ ಅವಕಾಶ ನೀಡಿದೆ ಕಾರ್ಯಾಚರಣೆ ಮುಂದುವರಿಯಿತು.</p>.<div><blockquote>ಪುರಸಭೆಯ ಮೇಲುಸ್ತುವಾರಿಯಲ್ಲಿ ಕಟ್ಟಡ ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ನಿಯೋಜಿಸಿರುವ ಸಿಬ್ಬಂದಿಗೆ ಕನಿಷ್ಠ ಕುಡಿಯುವ ನೀರು ಪೂರೈಕೆ ಮಾಡಲಾಗುವುದು </blockquote><span class="attribution">ಆಂಜನೇಯ, ಎಇಇ ಲೋಕೋಪಯೋಗಿ ಉಪ ವಿಭಾಗ, ಬ್ಯಾಡಗಿ</span></div>.<p><strong>ಸಹಕಾರ ನೀಡಿ: ಶಾಸಕ</strong></p><p>ಪಟ್ಟಣದ ಅಭಿವೃದ್ಧಿಗೆ ಜನರ ಸಹಕಾರ ಬೇಕು. ಕಾನೂನು ವಿಚಾರಗಳನ್ನು ಮುಂದಿಟ್ಟುಕೊಂಡು ಮಾತನಾಡುವುದು ಸರಿಯಲ್ಲ. ಸ್ವಾರ್ಥಬಿಟ್ಟು ಪಟ್ಟಣದ ಅಭಿವೃದ್ಧಿಗೆ ಕೈಜೋಡಿಸಿ ಎಂದು ಶಾಸಕ ಬಸವರಾಜ ಶಿವಣ್ಣನವರ ಮನವಿ ಮಾಡಿಕೊಂಡರು.</p><p>ಕಾರ್ಯಾಚರಣೆಗೆ ನಿಯೋಜಿಸಿದ ಸಿಬ್ಬಂದಿಗೆ ಮಾಸ್ಕ್, ಟೊಪ್ಪಿಗೆಯನ್ನು ಹೊರತುಪಡಿಸಿ ಕನಿಷ್ಠ ಕುಡಿಯುವ ನೀರಿನ ಪೂರೈಕೆ ಮಾಡಿರಲಿಲ್ಲ. ಬಿಸಿಲಿನಲ್ಲಿಯೇ ನಿಂತು ದೂಳಿನಲ್ಲಿಯೇ ಕಾರ್ಯಾಚರಣೆಯ ಉಸ್ತುವಾರಿ ಕೆಲಸ ಮಾಡುತ್ತಿರುವುದು ಕಂಡು ಬಂದಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬ್ಯಾಡಗಿ: ಪಟ್ಟಣದ ಮುಖ್ಯ ರಸ್ತೆಯ ಮೂಲಕ ಹಾಯ್ದು ಹೋಗಿರುವ ಸೊರಬ–ಗಜೇಂದ್ರಗಡ ರಾಜ್ಯ ಹೆದ್ದಾರಿ ವಿಸ್ತರಣಾ ಕಾರ್ಯಾಚರಣೆ ಭಾನುವಾರವೂ ಮುಂದುವರಿದಿದೆ. ಪರಿಹಾರದ ಹಣ ಪಡೆದ ಭೂಮಾಲೀಕರ ಒಟ್ಟಾರೆ 108 ಕಟ್ಟಡಗಳ ಪೈಕಿ 62 ಕಟ್ಟಡಗಳನ್ನು ತೆರವುಗೊಳಿಸಲಾಗಿದೆ.</p>.<p>ಇನ್ನೂ 23 ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಕೆಲ ಕಟ್ಟಡ ಮಾಲೀಕರೊಂದಿಗೆ ನಡೆದ ವಾದವಿವಾದಗಳ ಹೊರತುಪಡಿಸಿ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ, ಸ್ವಯಂ ಪ್ರೇರಣೆಯಿಂದ ಕಟ್ಟಡ ಮಾಲೀಕರು ಅಂಗಡಿಗಳಲ್ಲಿರುವ ವಸ್ತುಗಳನ್ನು ತೆರವುಗೊಳಿಸುತ್ತಿರುವುದು ಕಂಡು ಬಂದಿತು.</p>.<p>ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಬೆಳಿಗ್ಗೆಯಿಂದ ಪಟ್ಟಣದಲ್ಲಿ ಬೀಡು ಬಿಟ್ಟಿದ್ದು, ಕಟ್ಟಡವನ್ನು ತೆರವುಗೊಳಿಸಲು ಸಹಕಾರ ನೀಡುವಂತೆ ಮಾಲೀಕರಲ್ಲಿ ಮನವಿ ಮಾಡಿಕೊಂಡರು. ಹಳೆ ಪುರಸಭೆಯಿಂದ ಗುಮ್ಮನಹಳ್ಳಿ ರಸ್ತೆಯವರೆಗಿನ ಎರಡೂ ಬದಿಗೂ ಇರುವ ಕಟ್ಟಡಗಳ ತೆರವು ಕಾರ್ಯ ಮುಂದುವರಿದಿದೆ. ಸುಮಾರು 6ಕ್ಕೂ ಹೆಚ್ಚು ಜೆಸಿಬಿಗಳು ಸದ್ದು ಮಾಡುತ್ತಿವೆ. ಮಣ್ಣಿನ ಮಾಳಿಗೆಯ ಕಟ್ಟಡವಾಗಿದ್ದರಿಂದ ದೂಳು ಹೆಚ್ಚು ಆವರಿಸಿರುವುದು ಕಂಡು ಬಂದಿತು.</p>.<p>ತಿಳುವಳಿಕೆ ಪತ್ರ: ಪರಿಹಾರದ ಹಣವನ್ನು ಜಿಲ್ಲಾ ನ್ಯಾಯಾಲಯದಲ್ಲಿ ಜಮಾ ಮಾಡಬೇಕಾದ ಹಿನ್ನೆಲೆಯಲ್ಲಿ ಪರಿಹಾರದ ಹಣ ಪಡೆಯದ ಕಟ್ಟಡ ಮಾಲೀಕರಿಗೆ ಸಿಬ್ಬಂದಿ ಮೂಲಕ ಕಟ್ಟಡ ತೆರವುಗೊಳಿಸಿಕೊಳ್ಳುವಂತೆ ತಿಳಿವಳಿಕೆ ಪತ್ರಗಳನ್ನು ನೀಡಲಾಯಿತು. ಕೆಲ ಭೂಮಾಲೀಕರು ರಜೆಯ ದಿನದಂದು ಏಕೆ ತಿಳುವಳಿಕೆ ಪತ್ರ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಸೊಪ್ಪು ಹಾಕದ ಜಿಲ್ಲಾಡಳಿತ ತಿಳಿವಳಿಕೆ ಪತ್ರ ನೀಡಿದರು. ಬಾಡಿಗೆ ಅಂಗಡಿ ಹುಡುಕಿಕೊಳ್ಳುವವರೆಗೂ ನಮಗೆ ಕಾಲಾವಕಾಶ ಕೊಡಿ ಸರ್ ಎಂದು ಕೆಲ ವರ್ತಕರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು. ಆದರೆ ಅವಕಾಶ ನೀಡಿದೆ ಕಾರ್ಯಾಚರಣೆ ಮುಂದುವರಿಯಿತು.</p>.<div><blockquote>ಪುರಸಭೆಯ ಮೇಲುಸ್ತುವಾರಿಯಲ್ಲಿ ಕಟ್ಟಡ ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ನಿಯೋಜಿಸಿರುವ ಸಿಬ್ಬಂದಿಗೆ ಕನಿಷ್ಠ ಕುಡಿಯುವ ನೀರು ಪೂರೈಕೆ ಮಾಡಲಾಗುವುದು </blockquote><span class="attribution">ಆಂಜನೇಯ, ಎಇಇ ಲೋಕೋಪಯೋಗಿ ಉಪ ವಿಭಾಗ, ಬ್ಯಾಡಗಿ</span></div>.<p><strong>ಸಹಕಾರ ನೀಡಿ: ಶಾಸಕ</strong></p><p>ಪಟ್ಟಣದ ಅಭಿವೃದ್ಧಿಗೆ ಜನರ ಸಹಕಾರ ಬೇಕು. ಕಾನೂನು ವಿಚಾರಗಳನ್ನು ಮುಂದಿಟ್ಟುಕೊಂಡು ಮಾತನಾಡುವುದು ಸರಿಯಲ್ಲ. ಸ್ವಾರ್ಥಬಿಟ್ಟು ಪಟ್ಟಣದ ಅಭಿವೃದ್ಧಿಗೆ ಕೈಜೋಡಿಸಿ ಎಂದು ಶಾಸಕ ಬಸವರಾಜ ಶಿವಣ್ಣನವರ ಮನವಿ ಮಾಡಿಕೊಂಡರು.</p><p>ಕಾರ್ಯಾಚರಣೆಗೆ ನಿಯೋಜಿಸಿದ ಸಿಬ್ಬಂದಿಗೆ ಮಾಸ್ಕ್, ಟೊಪ್ಪಿಗೆಯನ್ನು ಹೊರತುಪಡಿಸಿ ಕನಿಷ್ಠ ಕುಡಿಯುವ ನೀರಿನ ಪೂರೈಕೆ ಮಾಡಿರಲಿಲ್ಲ. ಬಿಸಿಲಿನಲ್ಲಿಯೇ ನಿಂತು ದೂಳಿನಲ್ಲಿಯೇ ಕಾರ್ಯಾಚರಣೆಯ ಉಸ್ತುವಾರಿ ಕೆಲಸ ಮಾಡುತ್ತಿರುವುದು ಕಂಡು ಬಂದಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>