ಜಗದೀಶ ಅವರ ಬಾಮೈದ ಸತೀಶ ಮಾತನಾಡಿ, ‘ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಬಾಲಕನನ್ನು ಅಪಹರಿಸಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಇದಕ್ಕೂ ಮುಂಚೆ ಹೇಳಿದ್ದರು. ಒಮ್ಮೆ ಹಣಕ್ಕಾಗಿ, ಮತ್ತೊಮ್ಮೆ ಅನೈತಿಕ ಸಂಬಂಧಕ್ಕಾಗಿ ಎಂದು ಪೊಲೀಸರು ಪದೇ ಪದೇ ಹೇಳಿಕೆ ಬದಲಾಯಿಸುತ್ತಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ’ ಎಂದು ನುಡಿದರು.