ಜಿಲ್ಲಾ ಪಂಚಾಯ್ತಿಯ ಸಭಾಭವನಕ್ಕೆ ಶಾಸಕ ಸಿ.ಎಂ. ಉದಾಸಿ ಹೆಸರನ್ನು ನಾಮಕರಣ ಮಾಡಿ, 2017ರ ಜುಲೈ 21ರಂದು ಅಂದಿನ ಸಾಮಾನ್ಯ ಸಭೆಯು ನಿರ್ಣಯ ಅಂಗೀಕರಿಸಿತ್ತು. ಆ ಬಳಿಕ ಹೆಸರನ್ನು ಇಡಲಾಗಿತ್ತು. ಆದರೆ, ಈ ಕುರಿತು ರಾಣೆಬೆನ್ನೂರಿನ ಏಕನಾಥ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.ಸರ್ಕಾರಿ ಕಟ್ಟಡಗಳಿಗೆ ಚುನಾಯಿತ ಜನಪ್ರತಿನಿಧಿಗಳ ಹೆಸರನ್ನು ನಾಮಕರಣ ಮಾಡಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ –1993ರ ಅಡಿಯಲ್ಲಿ ಅವಕಾಶ ಇಲ್ಲದಿರುವುದನ್ನು ಪರಿಗಣಿಸಿದ ಸರ್ಕಾರವು,ನ್ಯಾಯಾಲಯದ ನಿರ್ದೇಶನದ ಕಾರಣ ನಾಮಕರಣ ರದ್ದುಪಡಿಸಿದೆ.