ಹಾವೇರಿ:ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಕೇಂದ್ರ ಸಚಿವರಾಗಿದ್ದ ದಿ.ಸುರೇಶ ಅಂಗಡಿ ಅವರಿಗೆ ಮೌನಾಚರಣೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ‘ರಾಜಕೀಯದಲ್ಲಿ ವಿವಾದಗಳು, ಆರೋಪ–ಪ್ರತ್ಯಾರೋಪಗಳು ಸಾಮಾನ್ಯ. ಆದರೆ, ಸುರೇಶ ಅಂಗಡಿಯವರು ಒಂದೇ ಒಂದು ಕಳಂಕವನ್ನು ತಮ್ಮ ರಾಜಕೀಯ ಬದುಕಿಗೆ ಅಂಟಿಸಿಕೊಂಡವರಲ್ಲ. ಸಜ್ಜನ ರಾಜಕಾರಣಿಯಾಗಿದ್ದ ಅವರು ಅಜಾತ ಶತ್ರು ಎನಿಸಿದ್ದರು’ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಗಿರೀಶ ತುಪ್ಪದ, ಪ್ರಭು ಹಿಟ್ನಳ್ಳಿ, ರಮೇಶ ಪಾಲನಕರ, ಚಂದ್ರಹಾಸ ಕ್ಯಾತಣ್ಣವನರ, ನಾಗರಾಜ ಹುರಳಿಕೊಪ್ಪಿ, ಮಂಜುನಾಥ ಮಡಿವಾಳರ, ಜಗದೀಶ ಮಲಗೋಡ, ಶಿವರಾಜ ಮತ್ತಿಹಳ್ಳಿ, ಮಂಜುನಾಥ ತಾಂಡೂರ, ನಾಗರಾಜ ಹಿರೇಮಠ, ಲಲಿತಾ ಗುಂಡೇನಹಳ್ಳಿ ಇತರರು ಇದ್ದರು.