ಪ್ರಕರಣದ ವಿಚಾರಣೆಯನ್ನು ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷೆ ಸುನಂದಾ ಹಾಗೂ ಸದಸ್ಯೆ ಮಹೇಶ್ವರಿ ಬಿ.ಎಸ್. ಅವರು ವಾಹನ ಮಾಲಿಕನಿಗೆ ₹35,214ಗಳನ್ನು ವಾರ್ಷಿಕ ಶೇ 9ರ ಬಡ್ಡಿ ಸೇರಿಸಿ ದೂರು ದಾಖಲಾದ ದಿನದಿಂದ ಪೂರ್ಣ ಪ್ರಮಾಣ ಹಣವನ್ನು ಈ ಆದೇಶವಾದ ಆರು ವಾರದೊಳಗೆ ನೀಡಬೇಕು. ಮಾನಸಿಕ ವ್ಯಥೆಗಾಗಿ ₹3 ಸಾವಿರ ಹಾಗೂ ಪ್ರಕರಣದ ಖರ್ಚಿಗಾಗಿ ₹1 ಸಾವಿರ ನೀಡಬೇಕು. ಇದಕ್ಕೆ ತಪ್ಪಿದಲ್ಲಿ ಪರಿಹಾರದ ಒಟ್ಟು ಮೊತ್ತಕ್ಕೆ ಶೇ 10ರ ಬಡ್ಡಿ ಸೇರಿಸಿ ಪೂರ್ಣ ಪ್ರಮಾಣದಲ್ಲಿ ನೀಡಬೇಕು ಎಂದು ಆದೇಶಿಸಿದ್ದಾರೆ.