ಅದೇ ರೀತಿ ಮಾವು, ಕಬ್ಬಿನ ಹೊಲಗಳಲ್ಲಿಯೂ ಸಾಕಷ್ಟು ನೀರು ಸಂಗ್ರಹವಾಗಿದ್ದರಿಂದ ಕಬ್ಬು ಹಾಗೂ ಮಾವಿನ ಗಿಡಗಳಲ್ಲಿ ಕೂಡಾ ಸಾಕಷ್ಟು ಹಾನಿಯಾಗಿವೆ. ಗುರುವಾರ ವಿಪರೀತವಾಗಿ ಸುರಿದ ಮಳೆಯಿಂದ ಹಾನಿಗೊಳಗಾದ ರೈತರ ಹಾನಿಯನ್ನು ಈ ಕೂಡಲೇ ತೋಟಗಾಗಿಕೆ ಇಲಾಖೆ ಹಾಗೂ ಕೃಷಿ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳನ್ನು ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ ಚಾವಡಿ ಒತ್ತಾಯಿಸಿದ್ದಾರೆ.