ನಗರಸಭೆ ಮಾಜಿ ಸದಸ್ಯ ಮಲ್ಲೇಶಪ್ಪ ಪಟ್ಟಣಶೆಟ್ಟಿ ಮಾತನಾಡಿ,ನಾಗೇಂದ್ರನಮಟ್ಟಿಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜಾಗವಿದೆ, ಕಟ್ಟಡವಿದೆ. ಓದಲು ಮಕ್ಕಳು ಇದ್ದಾರೆ. ಆದರೆ ಪ್ರೌಢಶಾಲೆಗೆ ಮರು ಮಂಜೂರಾತಿ ನೀಡಲು ಶಿಕ್ಷಣ ಇಲಾಖೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತ, ಹಿಂದುಳಿದ ವರ್ಗದ ಬಡಮಕ್ಕಳ ವ್ಯಾಸಂಗಕ್ಕೆ ಒಂದು ವಾರದಲ್ಲಿ ಅನುಕೂಲ ಕಲ್ಪಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.