ಹಂಸಭಾವಿ: ಇಲ್ಲಿನ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪಿಎಸ್ಐ ಜಯಪ್ಪ ನಾಯಕ ನೇತೃತ್ವದ ತಂಡ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿ ಸಮೀಪದ ಯಲವದಹಳ್ಳಿಯ ಮಂಜುನಾಥ ಗೊರವರ (35) ಈತನಿಂದ ಅಂಗನವಾಡಿಗಳಲ್ಲಿ ಕದ್ದಿದ್ದ 14 ಗ್ಯಾಸ್ ಸಿಲಿಂಡರ್ ಹಾಗೂ ಒಂದು ಕಬ್ಬಿಣದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಕಾರ್ಯಾಚಾರಣೆಯಲ್ಲಿ ಸಿಬ್ಬಂದಿ ಮನೋಹರ ಭೋಗಾವಿ, ಬಸವರಾಜ ಡೋಣನವರ, ಎಸ್.ಎಂ.ಅಂಗಡಿ, ಗಿರೀಶ ಪೂಜಾರ, ಸೋಮು ಭೋಗಾವಿ, ರಾಜೂ ಹುಲ್ಲತ್ತಿ, ಪ್ರಭು ಮತ್ತೂರ ಇದ್ದರು.