ಎರೆ ಎಂದರೆ ಮಣ್ಣು, ದೊರೆ ಎಂದರೆ ರಾಜ. ಈ ಬಾರಿಯ ಕಾರ್ಣಿಕದ ಅರ್ಥ ರೈತ ವರ್ಗ ದೊರೆಯಾಗಿ ಮೆರೆಯುತ್ತದೆ. ಅವರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಲಿದೆ. ಜನರು ಸಂಕಷ್ಟದಿಂದ ಪಾರಾಗಲಿದ್ದಾರೆ. ಇದಕ್ಕೆ ದೈವದ ಆಶೀರ್ವಾದ ಇದೆ. ನಾಡಿನ ಸುಭಿಕ್ಷೆಯ ಕುರಿತು ಹಾಗೂ ರಾಜಕೀಯ ಬೆಳವಣಿಗೆ ವಿಚಾರ ಕಾರ್ಣಿಕದ ನುಡಿಯಲ್ಲಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ಪೂಜಾರ ಅರ್ಥೈಸಿದರು.