ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರೆ ದೊರೆ ಆಕತಲೆ, ದೈವ ದರ್ಬಾರ್‌ ಆಕತಲೆ ಪರಾಕ್‌: ದೇವರಗುಡ್ಡ ಕಾರ್ಣಿಕರ ನುಡಿ

Last Updated 15 ಅಕ್ಟೋಬರ್ 2021, 12:18 IST
ಅಕ್ಷರ ಗಾತ್ರ

ರಾಣೆಬೆನ್ನೂರು:‘ಎರೆ ದೊರೆ ಆಕತಲೆ, ದೈವ ದರ್ಬಾರ್‌ ಆಕತಲೆ ಪರಾಕ್‌’ ಎಂದುಗೊರವಯ್ಯ ನಾಗಪ್ಪಜ್ಜ ಅವರು ತಾಲ್ಲೂಕಿನ ದೇವರಗುಡ್ಡ ಮಾಲತೇಶ ದೇವರ ಸನ್ನಿಧಿಯಲ್ಲಿ ಗುರುವಾರಬಿಲ್ಲನ್ನೇರಿ ಕಾರ್ಣಿಕ ನುಡಿದರು.

ಎರೆ ಎಂದರೆ ಮಣ್ಣು, ದೊರೆ ಎಂದರೆ ರಾಜ. ಈ ಬಾರಿಯ ಕಾರ್ಣಿಕದ ಅರ್ಥ ರೈತ ವರ್ಗ ದೊರೆಯಾಗಿ ಮೆರೆಯುತ್ತದೆ. ಅವರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಲಿದೆ. ಜನರು ಸಂಕಷ್ಟದಿಂದ ಪಾರಾಗಲಿದ್ದಾರೆ. ಇದಕ್ಕೆ ದೈವದ ಆಶೀರ್ವಾದ ಇದೆ. ನಾಡಿನ ಸುಭಿಕ್ಷೆಯ ಕುರಿತು ಹಾಗೂ ರಾಜಕೀಯ ಬೆಳವಣಿಗೆ ವಿಚಾರ ಕಾರ್ಣಿಕದ ನುಡಿಯಲ್ಲಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್‌ ಪೂಜಾರ ಅರ್ಥೈಸಿದರು.

ರಾಜಕೀಯವಾಗಿ ಹೇಳುವುದಾದರೆ, ಎರೆ ಎಂದರೆ ಕಟ್ಟಕಡೆಯದು ಎಂದರ್ಥ. ಜನತೆ ಮತ್ತು ದೈವ ಮೆಚ್ಚಿದ ಆಡಳಿತವನ್ನು ಈ ಸರ್ಕಾರ ನೀಡಲಿ ಎಂದು ಅರ್ಥೈಸಿಕೊಳ್ಳಬಹುದು ಎಂದು ಹೇಳಿದರು.

ರಾಜ್ಯದ ವಿವಿಧ ಮೂಲೆಯಿಂದ ಬಂದಿದ್ದ ಭಕ್ತರು ಮಾಲತೇಶ ದೇವರ ದರ್ಶನ ಪಡೆದರು. ಸಾಂಪ್ರದಾಯಿಕ ವೇಷಭೂಷಣದೊಂದಿಗೆ ಗೊರವಯ್ಯ ತಂಡದವರು ಭಕ್ತರ ಗಮನಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT