ಸಕಲೇಶಪುರದಲ್ಲಿ ಪ್ರಯಾಣಿಕರಿಗೆ ‘ಇಲ್ಲಿಯೇ ಇಳಿಯಿರಿ ಟಿಕೆಟ್ ಹಣ ಹಿಂದಿರುಗಿಸಲಾಗುವುದು’ ಎಂದು ರೈಲ್ವೆ ಅಧಿಕಾರಿಗಳು ಹೇಳಿದರು. ಇದು, ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಯಿತು. ಸುಮಾರು ಒಂದು ಸಾವಿರ ಪ್ರಯಾಣಿಕರಿದ್ದರು. ‘ಮಾರ್ಗ ಮಧ್ಯೆ ನಿಲ್ಲಿಸಿ ಇಳಿಯಿರಿ ಎಂದರೆ ಎಲ್ಲಿಗೆ ಹೋಗುವುದು’ ಎಂದು ಅಧಿಕಾರಿಗಳ ಜತೆಗೆ ವಾಗ್ವಾದ ನಡೆಸಿದರು.