ತಾಲ್ಲೂಕಿನ ನರಸೀಪರದಲ್ಲಿ ಬುಧವಾರ ಏರ್ಪಡಿಸಿದ್ದ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿ,‘ಹರಜಾತ್ರೆ’ಯಲ್ಲಿ ನಡೆದಂಥ ಘಟನೆಗಳನ್ನು ಎದುರಿಸುವುದು ನಮಗೆ ಅನಿವಾರ್ಯ. ದಿಂಗಾಲೇಶ್ವರ ಶ್ರೀ, ನಿಡುಮಾಮಿಡಿ ಶ್ರೀ ಈ ಘಟನೆಯ ಬಗ್ಗೆ ನೊಂದುಕೊಂಡು ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಯಾವುದೇ ಸಮುದಾಯಕ್ಕೆ ನೋವಾಗದ ರೀತಿಯಲ್ಲಿ ಮುಂದಿನ 3 ವರ್ಷ ಅಭಿವೃದ್ಧಿಪರವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.