<p>ಹಿರೇಕೆರೂರ: ತಾಲ್ಲೂಕಿನ ದೂದಿಹಳ್ಳಿ ಗ್ರಾಮದ ಬಾಳಕಟ್ಟೆ ಕೆರೆಯಲ್ಲಿ ಗ್ರಾಮದ ವೀರನಗೌಡ ಕೊಡಮಗ್ಗಿ ಅವರ ಜಮೀನು ಬದಿಯ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಬಾಳೆಕಟ್ಟೆ ಕೆರೆಯಲ್ಲಿ ರೈತರು ಹೂಳೆತ್ತುವಾಗ ಹಳೆಯ ಕಾಲದ ನಂದಿ ವಿಗ್ರಹ ದೊರೆತಿದೆ. ಚಾಲುಕ್ಯರ ಕಾಲದ್ದಿರಬಹುದು ಎಂದು ಅಂದಾಜಿಸಲಾಗಿದೆ.</p>.<p>ಶಿವನ ವಾಹನವಾದ ಈ ಬಸವಣ್ಣನ ದರ್ಶನದಿಂದ ಗ್ರಾಮಸ್ಥರಲ್ಲಿ ಸಡಗರ ಮತ್ತು ಭಕ್ತಿಯ ವಾತಾವರಣ ಮನೆಮಾಡಿದೆ.</p>.<p>‘ಈ ಭೂಮಿಯಲ್ಲಿ ಇಂತಹ ಪುರಾತನ ಕುರುಹುಗಳು ಪತ್ತೆಯಾಗಿರುವುದು ನಮ್ಮ ಗ್ರಾಮದ ಪುಣ್ಯ ಮತ್ತು ಸಾಂಸ್ಕೃತಿಕ ಹಿರಿಮೆಗೆ ಸಾಕ್ಷಿಯಾಗಿದೆ’ ಎಂದು ಗ್ರಾಮಸ್ಥರೆಲ್ಲರೂ ವಿಗ್ರಹಕ್ಕೆ ಹೂವಿನ ಅಲಂಕಾರ ಮಾಡಿ ಪೂಜೆ ಮಾಡಿದರು.</p>.<p>ರಟ್ಟಿಹಳ್ಳಿ ಪ್ರಿಯದರ್ಶಿನಿ ಕಾಲೇಜಿನ ಉಪನ್ಯಾಸಕ ಚಾಮರಾಜ ಕಮ್ಮಾರ, ಇತಿಹಾಸ ಆಸಕ್ತ ಹಾಗೂ ಸಮುದಾಯ ಆರೋಗ್ಯಾಧಿಕಾರಿ ನಟರಾಜ ಕೆ.ವಿ. ಗ್ರಾಮ ಪಂಚಾಯತಿ ಮಾಜಿ ಸದಸ್ಯ ಬಸಣ್ಣ ಬಣಕಾರ, ಪಾಲಾಕ್ಷಪ್ಪ ಕಾಯಕದ, ವೀರನಗೌಡ ಕೊಡಮಗ್ಗಿ ಮತ್ತು ಗ್ರಾಮಸ್ಥರು ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260413-22-1908237186</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಿರೇಕೆರೂರ: ತಾಲ್ಲೂಕಿನ ದೂದಿಹಳ್ಳಿ ಗ್ರಾಮದ ಬಾಳಕಟ್ಟೆ ಕೆರೆಯಲ್ಲಿ ಗ್ರಾಮದ ವೀರನಗೌಡ ಕೊಡಮಗ್ಗಿ ಅವರ ಜಮೀನು ಬದಿಯ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಬಾಳೆಕಟ್ಟೆ ಕೆರೆಯಲ್ಲಿ ರೈತರು ಹೂಳೆತ್ತುವಾಗ ಹಳೆಯ ಕಾಲದ ನಂದಿ ವಿಗ್ರಹ ದೊರೆತಿದೆ. ಚಾಲುಕ್ಯರ ಕಾಲದ್ದಿರಬಹುದು ಎಂದು ಅಂದಾಜಿಸಲಾಗಿದೆ.</p>.<p>ಶಿವನ ವಾಹನವಾದ ಈ ಬಸವಣ್ಣನ ದರ್ಶನದಿಂದ ಗ್ರಾಮಸ್ಥರಲ್ಲಿ ಸಡಗರ ಮತ್ತು ಭಕ್ತಿಯ ವಾತಾವರಣ ಮನೆಮಾಡಿದೆ.</p>.<p>‘ಈ ಭೂಮಿಯಲ್ಲಿ ಇಂತಹ ಪುರಾತನ ಕುರುಹುಗಳು ಪತ್ತೆಯಾಗಿರುವುದು ನಮ್ಮ ಗ್ರಾಮದ ಪುಣ್ಯ ಮತ್ತು ಸಾಂಸ್ಕೃತಿಕ ಹಿರಿಮೆಗೆ ಸಾಕ್ಷಿಯಾಗಿದೆ’ ಎಂದು ಗ್ರಾಮಸ್ಥರೆಲ್ಲರೂ ವಿಗ್ರಹಕ್ಕೆ ಹೂವಿನ ಅಲಂಕಾರ ಮಾಡಿ ಪೂಜೆ ಮಾಡಿದರು.</p>.<p>ರಟ್ಟಿಹಳ್ಳಿ ಪ್ರಿಯದರ್ಶಿನಿ ಕಾಲೇಜಿನ ಉಪನ್ಯಾಸಕ ಚಾಮರಾಜ ಕಮ್ಮಾರ, ಇತಿಹಾಸ ಆಸಕ್ತ ಹಾಗೂ ಸಮುದಾಯ ಆರೋಗ್ಯಾಧಿಕಾರಿ ನಟರಾಜ ಕೆ.ವಿ. ಗ್ರಾಮ ಪಂಚಾಯತಿ ಮಾಜಿ ಸದಸ್ಯ ಬಸಣ್ಣ ಬಣಕಾರ, ಪಾಲಾಕ್ಷಪ್ಪ ಕಾಯಕದ, ವೀರನಗೌಡ ಕೊಡಮಗ್ಗಿ ಮತ್ತು ಗ್ರಾಮಸ್ಥರು ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260413-22-1908237186</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>