ಶಿಗ್ಗಾವಿ: ತಾಲ್ಲೂಕು ಬಂಕಾಪುರ-ಮುನವಳ್ಳಿ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ಅಂಗವಾಗಿ ಶನಿವಾರ ಆಯೋಸಿದ್ದ ಕುಸ್ತಿ ಸ್ಪರ್ಧೆಗೆ ನಾರಾಯಣಪುರ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಉಮೇಶ ಅಂಗಡಿ ಚಾಲನೆ ನೀಡಿದರು.
ದೇವಸ್ಥಾನದ ಅರ್ಚಕ ಸೋಮಂತ ಪುಜಾರ ಕುಸ್ತಿ ಕಣಕ್ಕೆ ಪೂಜೆ ಸಲ್ಲಿಸಿದರು. ಶಂಖನಾದ ಮೊಳಗಿಸಿ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಕೋವಿಡ್ ಕಾರಣದಿಂದ ರಾಜ್ಯ ಮಟ್ಟದ ಪ್ರಸಿದ್ಧ ಪೈಲ್ವಾನರು ಪಂದ್ಯದಲ್ಲಿ ಭಾಗವಹಿಸದೇ ಇದ್ದದರಿಂದ ಕುಸ್ತಿ ಕಣ ಕಳೆಗುಂದಿತ್ತು.
ಜಾತ್ರೋತ್ಸವ ಕುಸ್ತಿ ಸಮಿತಿಯವರು ಪ್ರತಿವರ್ಷದ ಪದ್ದತಿಯಂತೆ ಸಾಂಕೇತಿಕವಾಗಿ ಬೈಲು ಕುಸ್ತಿ ನಡೆಸಿದರು. ಪಂದ್ಯ ವೀಕ್ಷಿಸಿಸಲು ಕಡಿಮೆ ಸಂಖ್ಯೆಯಲ್ಲಿ ಜನ ಸೇರಿದ್ದರು.