ತಾಯಿ ಭುವನೇಶ್ವರಿಗೆ ಪುಷ್ಪ ಅರ್ಪಿಸುವ ಮೂಲಕ ಸಮಾರಂಭವನ್ನು ಜ್ಞಾನಗಂಗಾ ಶಿಕ್ಷಣ ಸಮಿತಿಯ ಅಧ್ಯಕ್ಷ ಸಿ.ಎಂ. ಪಟ್ಟಣಶೆಟ್ಟಿ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಯ ಜಾಗೃತಿ ಮೂಡಿಸುವಲ್ಲಿ ಜಿಲ್ಲೆಯ ಕನ್ನಡ ಕಟ್ಟಾಳುಗಳ ಕಾಣಿಕೆ ಬಹಳ ದೊಡ್ಡದು. ಗಳಗನಾಥ, ಶಾಂತಕವಿಗಳು, ಮಹಾದೇವ ಬಣಕಾರ, ಪಾಟೀಲ ಪುಟ್ಟಪ್ಪ, ಚಂಪಾ ಅವರಂಥವರು ಈ ನೆಲದವರು ಎಂಬುದು ಈ ಮಕ್ಕಳಿಗೆ ತಿಳಿಯಬೇಕು ಎಂದರು.