ರುದ್ರಪ್ಪ ಲಮಾಣಿ ಅವರು ಈಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಪಟ್ಟಿ ಬದಲಾವಣೆ ಮಾಡಲು ಈಗಿನ ಆಶ್ರಯ ಸಮಿತಿಗೆ ಅಧಿಕಾರವಿಲ್ಲ’ ಎಂದು ಹೇಳಿದ್ದಾರೆ. ಅನರ್ಹ ಫಲಾನುಭವಿಗಳು ಯಾವುದೇ ಹಂತದಲ್ಲಿ ಕಂಡು ಬಂದರೂ ಪಟ್ಟಿ ರದ್ದುಗೊಳಿಸಿ, ಅರ್ಹರನ್ನು ಆಯ್ಕೆ ಮಾಡಬಹುದು ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ. ಇದೆಲ್ಲಾ ಗೊತ್ತಿದ್ದರೂ, ರುದ್ರಪ್ಪ ಅವರು ಸುಳ್ಳು ಹೇಳಿಕೆ ನೀಡಿ, ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ದೂರಿದ್ದಾರೆ.