ಭೂಸ್ವಾಧೀನ ಪ್ರಕ್ರಿಯೆ ನಿಲ್ಲಿಸದಿದ್ದರೆ ಕಾಮಗಾರಿ ಜಾಗದಲ್ಲಿ ರೈತರು ಹಾಗೂ ಕುಟುಂಬದವರು ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ. ಸರ್ಕಾರ ಇನ್ನೆರಡು ದಿನಗಳಲ್ಲಿ ನಿರ್ಣಯ ಕೈಗೊಳ್ಳಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದು ತಿಳಿಸಿದರು. ಸತ್ಯಾಗ್ರಹದಲ್ಲಿ ರೈತ ಪ್ರಮುಖರಾದ ಸಿದ್ಧನಗೌಡ ಪಾಟೀಲ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳಿ, ಸಿನಿಮಾ ನಿರ್ದೇಶಕ ಕೆ. ನರೇಂದ್ರಬಾಬು, ಉಜನೆಪ್ಪ ಕೋಡಿಹಳ್ಳಿ, ಹರೀಶ ಇಂಗಳಗೊಂದಿ, ವಿನಯ ಪಾಟೀಲ, ಎಸ್.ಡಿ. ಹಿರೇಮಠ, ಹನುಮಂತಪ್ಪ ದಿವಿಗೀಹಳ್ಳಿ, ವೀರನಗೌಡ ಪ್ಯಾಟೀಗೌಡ್ರ, ವಸಂತ ದ್ಯಾವಕ್ಕಳವರ, ಲೀಲಾವತಿ ಗೋಣಗೇರಿ, ರಂಗಪ್ಪ ಬಡಪ್ಪಳವರ, ಪರಮೇಶಪ್ಪ ಕಟ್ಟೇಕಾರ, ಇಸೂಫ್ ಸೈಕಲಗಾರ, ನಾಸೀರಸಾಬ ಸೈಕಲಗಾರ ಇದ್ದರು.