ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರದ ಪ್ರಭಾವಿ ವ್ಯಕ್ತಿಗಳಿಂದ ಬೆದರಿಕೆ’

Last Updated 7 ಜೂನ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಯಾವುದೇ ಹೊಸ ಸುದ್ದಿ ವಾಹಿನಿ ಆರಂಭಿಸದಂತೆ ಆಡಳಿತ ಪಕ್ಷದಿಂದ ನನಗೆ ಬೆದರಿಕೆ ಬಂದಿದೆ ಎಂದು ಪತ್ರಕರ್ತೆ ಬರ್ಖಾ ದತ್ ಆರೋಪಿಸಿದ್ದಾರೆ.

ಈ ಸಂಬಂಧ ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

‘ನನ್ನ ಮತ್ತು ನನ್ನ ಕುಟುಂಬದ ಮೇಲೆ ಕಣ್ಣಿಡಲಾಗಿದೆ ಎಂದು ಸರ್ಕಾರದಲ್ಲಿರುವ ಅತ್ಯಂತ ಪ್ರಭಾವಿ ವ್ಯಕ್ತಿಗಳು ಹೇಳಿದ್ದಾರೆ. ನಾನು ಯಾವುದೇ ಹೊಸ ಟಿ.ವಿ. ಪ್ರಾಜೆಕ್ಟ್ ಆರಂಭಿಸುವುದನ್ನು ತಡೆಯುವ ಸಲುವಾಗಿ ನನಗೆ ಕೇಡುಂಟು ಮಾಡಲಾಗುತ್ತದಂತೆ. ನಿಮ್ಮ ಮನೆಗೆ ಖಾಸಗಿ ಭದ್ರತೆ ನಿಯೋಜಿಸಿಕೊಳ್ಳುವಂತೆ ನನಗೆ ಸಲಹೆ ನೀಡಿದ್ದಾರೆ. ಇದು ನನ್ನ ದೇಶವೇ?’ ಎಂದು ಬರ್ಖಾ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT