ಶ್ರೀ ಕುಮಾರೇಶ್ವರ ಕಾಲೇಜು ರಸ್ತೆ, ಹಾಗೂ ಕುಂಬಾರ ಓಣಿಗೆ ಹೊಂದಿಕೊಂಡಿರುವ ಈ ರಸ್ತೆಯ ತುಂಬಾ ಕಸದ ರಾಶಿ ಬಿದ್ದಿದ್ದು, ಕೆಟ್ಟ ವಾಸನೆ ಬೀರುತ್ತಿದೆ. ಪಟ್ಟಣ ಪಂಚಾಯ್ತಿ ಅವರು ಇಲ್ಲಿ ಸರಿಯಾಗಿ ಚರಂಡಿ ಸ್ವಚ್ಛಗೊಳಿಸುವುದಾಗಲೀ, ಕಸ ತೆಗೆದುಕೊಂಡು ಹೋಗುವುದಾಗಲಿ ಮಾಡುವುದಿಲ್ಲ. ರಾತ್ರಿ ವೇಳೆ ಇಲ್ಲಿ ಓಡಾವುದು ಕಷ್ಟವಾಗುತ್ತದೆ. ಸಾರ್ವಜನಿಕರು ಕಸದ ರಾಶಿಯಲ್ಲಿ ಅನುಪಯುಕ್ತ ಗಾಜಿನ ಬಾಟಲಿಗಳನ್ನು ಎಸೆಯುತ್ತಾರೆ. ಇದರಿಂದ ಮಕ್ಕಳು ಇಲ್ಲಿ ಓಡಾಡುವಾಗ ಅನೇಕ ಬಾರಿ ತೊಂದರೆಗೆ ಒಳಗಾಗಿದ್ದಾರೆ ಎನ್ನುತ್ತಾರೆ ಇಲ್ಲಿನ ನಿವಾಸಿ ಮುರಗೇಶ ಚಕ್ರಸಾಲಿ.