ಪಟ್ಟಣದಲ್ಲಿ ಶುಕ್ರವಾರ ನಡೆದ ಶಿಗ್ಗಾವಿ, ಸವಣೂರ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನೆಗಟಿವ್ ವರದಿ ಬಂದರು ಸಹ ರೋಗಿ ಬಗ್ಗೆ ನಿರ್ಲಕ್ಷ್ಯತೆ ಸರಿಯಲ್ಲ. ಅವರಿಗೂ ಸರಿಯಾದ ಚಿಕಿತ್ಸೆ, ಔಷಧಿಗಳನ್ನು ವಿತರಿಸಬೇಕು. ಶಿಗ್ಗಾವಿ, ಸವಣೂರ ಆಸ್ಪತ್ರೆಯಲ್ಲಿರುವ ಕೋವಿಡ್ ರೋಗಿಗಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದರು.