‘ಏಸು ಸ್ವಾಮಿಯ ಸಪ್ತ ವಾಕ್ಯಗಳನ್ನು ಓದುವುದು, ಅರ್ಥೈಸಿಕೊಳ್ಳುವುದು, ಪ್ರಾರ್ಥನೆ ಸಲ್ಲಿಸುವುದು, ಗೀತೆಗಳನ್ನು ಹಾಡುವುದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಮನೆಯಲ್ಲೇ ಆಚರಿಸಿದೆವು. ಕೊರೊನಾ ಸೋಂಕು ನಿವಾರಣೆಯಾಗಿ, ದೇಶ ಸುರಕ್ಷಿತವಾಗಿರಲಿ ಎಂದು ಬೇಡಿಕೊಂಡೆವು’ ಎಂದು ನಗರದ ಮಾಧುರಿ ದೇವದಾರ್ ಮತ್ತು ಜಾನ್ ಗುರುಸಿದ್ದಪ್ಪ ದೇವದಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.