ಜನರ ತೆರಿಗೆ ಹಣದಲ್ಲಿ ಐಷರಾಮಿ ಜೀವನ ನಡೆಸುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ದುಂಧುವೆಚ್ಚಕ್ಕೆ ಕಡಿವಾಣ ಹಾಕುವ ಕಾಯಿದೆ ಬರಬೇಕು. ಇಲ್ಲದಿದ್ದರೆ, ಶ್ರೀಮಂತರು ಇನ್ನಷ್ಟು ಶ್ರೀಮಂತರಾಗಿ ಬಡವರ ಸಂಖ್ಯೆ ಹೆಚ್ಚಾಗುತ್ತದೆ. ದೇಶ ದಿವಾಳಿಯಾಗುವ ಅಪಾಯವೇ ಹೆಚ್ಚಿದೆ. ಪ್ರಣಾಳಿಕೆ ಈಡೇರಿಸದ ಪಕ್ಷಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದರು.