ಹಾವೇರಿ: ರಾಣೆಬೆನ್ನೂರು ನಗರಕ್ಕೆ ಶುಕ್ರವಾರ ಬಂದ ನೂತನ ಸಚಿವ ಆರ್.ಶಂಕರ್ ಅವರನ್ನು ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಕೆಇಬಿ ಗಣಪತಿ ದೇವಸ್ಥಾನದಿಂದ ಬಿಜೆಪಿ ಕಾರ್ಯಾಲಯದವರೆಗೆ ತೆರೆದ ಜೀಪಿನಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ಕರೆ ತಂದರು.
ಕ್ರೇನ್ ಸಹಾಯದಿಂದ ಬೃಹತ್ ಸೇಬಿನ ಹಾರವನ್ನು ಹಾಕಿ ಅಭಿಮಾನ ಮೆರೆದರು. ಹಾರ ಹಾಕುವ ಕಡೇ ಕ್ಷಣದಲ್ಲಿ ಹಾರ ಹರಿದುಬಿದ್ದು, ಕೆಲ ಕ್ಷಣ ಆತಂಕ ಸೃಷ್ಟಿಸಿತು. ಆದರೆ, ಯಾವುದೇ ತೊಂದರೆಯಾಗಲಿಲ್ಲ.
ತಮಟೆ ಬಾರಿಸುತ್ತಾ, ಪಟಾಕಿ ಸಿಡಿಸುತ್ತಾ, ನೃತ್ಯ ಮಾಡುವ ಮೂಲಕ ಸಂಭ್ರಮಾಚರಣೆ ನಡೆಸಿದರು.
ಹೆಜ್ಜೆ ಹೆಜ್ಜೆಗೂ ಹೂವಿನ ಹಾರಗಳನ್ನು ಹಾಕುವ ಮೂಲಕ ಅಭಿಮಾನ ಮೆರೆದರು. ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಿದ್ದರು.
ಮೆರವಣಿಗೆಯಿಂದ ಸಂಚಾರ ದಟ್ಟಣೆ ಉಂಟಾಗಿ, ಸಾರ್ವಜನಿಕರು ಪರದಾಡಿದರು.
ಬೃಹದಾಕಾರದ ಸೇಬಿನ ಹಾರ ಹಾಕುವ ಮೂಲಕ ಅಭಿಮಾನಿಗಳು ಸಚಿವರನ್ನು ಬರಮಾಡಿಕೊಂಡರು