<p>ಹಾನಗಲ್: ಜೇನು ಹುಳುಗಳ ದಾಳಿಗೆ ಹಲವರು ಗಾಯಗೊಂಡ ಘಟನೆ ಬುಧವಾರ ಮಧ್ಯಾಹ್ನ ಇಲ್ಲಿನ ನ್ಯಾಯಾಲಯ ಮುಂಭಾಗದ ಮುಖ್ಯರಸ್ತೆಯಲ್ಲಿ ನಡೆದಿದೆ.</p>.<p>ಈ ಭಾಗದ ಬಹುಮಹಡಿ ಕಟ್ಟಡ ದಲ್ಲಿ ಗೂಡು ಕಟ್ಟಿದ್ದ ಜೇನು ಹುಳು ಗಳು ಒಮ್ಮೆಲೇ ಹಾರಾಡಿ ಕೊಂಡು ಬಂದು ಸಿಕ್ಕವರ ಮೇಲೆ ದಾಳಿ ಮಾಡಿ ಕಚ್ಚಿವೆ ಎಂದು ಜನರು ಹೇಳಿದ್ದಾರೆ.</p>.<p>ಮುಖ್ಯರಸ್ತೆಯಲ್ಲಿ ಪಾದಚಾರಿಗಳು, ವಾಹನ ಸವಾರರ ಮೇಲೆ ಮುಗಿಬಿದ್ದು ಕಂಡಲ್ಲೆಲ್ಲ ಜೇನು ಹುಳುಗಳು ಕಚ್ಚಿವೆ. ಕೆಲವು ವಕೀಲರು ಜೇನು ಹುಳುಗಳ ದಾಳಿಗೆ ಒಳಗಾಗಿದ್ದಾರೆ.</p>.<p>ಬಹಳಷ್ಟು ಸಂಖ್ಯೆಯಲ್ಲಿದ್ದ ಜೇನು ಹುಳುಗಳು ಏಕಾಎಕಿ ದಾಳಿ ಮಾಡಿವೆ. ಜೇನು ಹುಳುಗಳ ದಾಳಿ ಮಧ್ಯಾಹ್ನದಿಂದ ಸಂಜೆ ತನಕ ಮುಂದು ವರೆದಿತ್ತು.</p>.<p>ಮುಖ್ಯರಸ್ತೆ ಮತ್ತು ನ್ಯಾಯಾಲಯ ಆವರಣದಲ್ಲಿಯೂ ಜೇನು ಹುಳುಗಳು ಜನರ ಮೇಲೆ ದಾಳಿ ಮಾಡಿವೆ. ಇಲ್ಲಿನ ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಜೇನು ಹುಳು ಕಚ್ಚಿಸಿಕೊಂಡವರು ಚಿಕಿತ್ಸೆ ಪಡೆದಿದ್ದಾರೆ.</p>.<p>ಈ ಕುರಿತು ತಾಲ್ಲೂಕು ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ಅಖಿಲೇಶ ಮಾತನಾಡಿ, ‘ಜೇನು ಹುಳು ದಾಳಿಯಿಂದ 23 ಜನರು ಗಾಯಗೊಂಡಿದ್ದಾರೆ. 16 ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ಜೇನು ನೊಣ ಕಚ್ಚದ್ದರಿಂದ ಅವರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗಿದೆ’ ಎಂದು ಹೇಳಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260326-22-13553724</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾನಗಲ್: ಜೇನು ಹುಳುಗಳ ದಾಳಿಗೆ ಹಲವರು ಗಾಯಗೊಂಡ ಘಟನೆ ಬುಧವಾರ ಮಧ್ಯಾಹ್ನ ಇಲ್ಲಿನ ನ್ಯಾಯಾಲಯ ಮುಂಭಾಗದ ಮುಖ್ಯರಸ್ತೆಯಲ್ಲಿ ನಡೆದಿದೆ.</p>.<p>ಈ ಭಾಗದ ಬಹುಮಹಡಿ ಕಟ್ಟಡ ದಲ್ಲಿ ಗೂಡು ಕಟ್ಟಿದ್ದ ಜೇನು ಹುಳು ಗಳು ಒಮ್ಮೆಲೇ ಹಾರಾಡಿ ಕೊಂಡು ಬಂದು ಸಿಕ್ಕವರ ಮೇಲೆ ದಾಳಿ ಮಾಡಿ ಕಚ್ಚಿವೆ ಎಂದು ಜನರು ಹೇಳಿದ್ದಾರೆ.</p>.<p>ಮುಖ್ಯರಸ್ತೆಯಲ್ಲಿ ಪಾದಚಾರಿಗಳು, ವಾಹನ ಸವಾರರ ಮೇಲೆ ಮುಗಿಬಿದ್ದು ಕಂಡಲ್ಲೆಲ್ಲ ಜೇನು ಹುಳುಗಳು ಕಚ್ಚಿವೆ. ಕೆಲವು ವಕೀಲರು ಜೇನು ಹುಳುಗಳ ದಾಳಿಗೆ ಒಳಗಾಗಿದ್ದಾರೆ.</p>.<p>ಬಹಳಷ್ಟು ಸಂಖ್ಯೆಯಲ್ಲಿದ್ದ ಜೇನು ಹುಳುಗಳು ಏಕಾಎಕಿ ದಾಳಿ ಮಾಡಿವೆ. ಜೇನು ಹುಳುಗಳ ದಾಳಿ ಮಧ್ಯಾಹ್ನದಿಂದ ಸಂಜೆ ತನಕ ಮುಂದು ವರೆದಿತ್ತು.</p>.<p>ಮುಖ್ಯರಸ್ತೆ ಮತ್ತು ನ್ಯಾಯಾಲಯ ಆವರಣದಲ್ಲಿಯೂ ಜೇನು ಹುಳುಗಳು ಜನರ ಮೇಲೆ ದಾಳಿ ಮಾಡಿವೆ. ಇಲ್ಲಿನ ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಜೇನು ಹುಳು ಕಚ್ಚಿಸಿಕೊಂಡವರು ಚಿಕಿತ್ಸೆ ಪಡೆದಿದ್ದಾರೆ.</p>.<p>ಈ ಕುರಿತು ತಾಲ್ಲೂಕು ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ಅಖಿಲೇಶ ಮಾತನಾಡಿ, ‘ಜೇನು ಹುಳು ದಾಳಿಯಿಂದ 23 ಜನರು ಗಾಯಗೊಂಡಿದ್ದಾರೆ. 16 ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ಜೇನು ನೊಣ ಕಚ್ಚದ್ದರಿಂದ ಅವರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗಿದೆ’ ಎಂದು ಹೇಳಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260326-22-13553724</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>