<p><strong>ಹಾನಗಲ್</strong>: ‘ದಾರ್ಶನಿಕರ ಮೂರ್ತಿ ಸ್ಥಾಪನೆ ವಿಷಯವಾಗಿ ಸಮಾಜಗಳ ನಡುವೆ ಸಾಮರಸ್ಯ ಹದಗೆಡಬಾರದು. ಹೀಗಾಗಿ ಬೀದಿಗಳಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ನಮ್ಮ ಆಸಕ್ತಿ ಇಲ್ಲ‘ ಎಂದು ಕಾಗಿನೆಲೆ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.</p>.<p>ಇಲ್ಲಿನ ಕನಕ ಉದ್ಯಾನದಲ್ಲಿ ಸೋಮವಾರ ನಡೆದ 12 ಅಡಿ ಎತ್ತರದ ಕನಕದಾಸರ ಕಂಚಿನ ಮೂರ್ತಿಯ ಅನಾವರಣ ಹಾಗೂ ಆನಂತರ ಬಾಬುಜಗಜೀವನರಾಮ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಈ ಹಿಂದೆ ಕನಕ ಉದ್ಯಾನ ಉಳಿಸುವ ಹೋರಾಟದಲ್ಲಿ ಹಾನಗಲ್ನಲ್ಲಿ ಭಾಗವಹಿಸಿದ್ದೆ. ಇದು ನಮ್ಮ ಮೊದಲ ಹೋರಾಟವಾಗಿತ್ತು. ಹೀಗಾಗಿ ಇದೇ ಉದ್ಯಾನದಲ್ಲಿ ಕನಕದಾಸರ ಭವ್ಯ ಮೂರ್ತಿ ಅನಾವರಣಕ್ಕೆ ಆಗಮಿಸುವ ಸಂಕಲ್ಪದಿಂದ ಬಂದಿದ್ದೇನೆ’ ಎಂದರು.</p>.<p>ತಾಲ್ಲೂಕಿನ ಯಳವಟ್ಟಿ ಗ್ರಾಮದಲ್ಲಿರುವ ಕಾಗಿನೆಲೆ ಮಠದ ಜಾಗೆಯಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಶ್ರೀನಿವಾಸ ಮಾನೆ ಆಧ್ಯತೆ ನೀಡಬೇಕು ಎಂದು ಆಗ್ರಹಿಸಿದರು.</p>.<p>ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಕನಕದಾಸರ ಆದರ್ಶಗಳ ಪಾಲನೆಯಾಗಬೇಕು ಎಂಬ ಉದ್ದೇಶದಿಂದ ಪಟ್ಟಣದ ಮುಖ್ಯ ಭಾಗದಲ್ಲಿ ಕನಕದಾಸರ ಮೂರ್ತಿಯ ಪ್ರತಿಷ್ಠಾನವಾಗಿದೆ. ಕನಕದಾಸರ ಕಂಚಿನ ಮೂರ್ತಿ ಅನಾವರಣದ ಕನಸು ಇಂದು ನನಸಾಗಿದೆ. ಕಂಚಿನ ಮೂರ್ತಿ ಅದೊಂದು ಪ್ರತಿಮೆಯಲ್ಲ, ಅದು ಅವರ ಆದರ್ಶ, ಚಿಂತನೆ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ ಎಂದರು.</p>.<p>ಹೋತನಹಳ್ಳಿಯ ಸಿದ್ದಾರೂಢಮಠದ ಸದ್ಗುರು ಶಂಕರಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಪ್ರದೇಶ ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ ಪವಾಡಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಶಿವರಾಜ ಸಜ್ಜನರ, ಪ್ರಮುಖರಾದ ಯಲ್ಲಪ್ಪ ಕಿತ್ತೂರ, ಪ್ರಕಾಶಗೌಡ ಪಾಟೀಲ, ಭೋಜರಾಜ್ ಕರೂದಿ, ಎಂ.ಬಿ.ಕಲಾಲ, ಎ.ಎಸ್.ಬಳ್ಳಾರಿ, ನಾಗರಾಜ ಅನ್ವೇರಿ, ಸಿ.ಮಂಜುನಾಥ, ರಾಜೇಂದ್ರ ಹಾವೇರಣ್ಣನವರ, ರವಿ ಒಡೆಯರ, ಮಾಲತೇಶ ಬ್ಯಾಗವಾದಿ, ಸುರೇಶ ದೊಡ್ಡಕುರುಬರ ಇದ್ದರು. ದಾನಪ್ಪ ಗಂಟೇರ ಸ್ವಾಗತಿಸಿದರು. ವಿನಾಯಕ ಕುರುಬರ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260526-22-1597972968</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾನಗಲ್</strong>: ‘ದಾರ್ಶನಿಕರ ಮೂರ್ತಿ ಸ್ಥಾಪನೆ ವಿಷಯವಾಗಿ ಸಮಾಜಗಳ ನಡುವೆ ಸಾಮರಸ್ಯ ಹದಗೆಡಬಾರದು. ಹೀಗಾಗಿ ಬೀದಿಗಳಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ನಮ್ಮ ಆಸಕ್ತಿ ಇಲ್ಲ‘ ಎಂದು ಕಾಗಿನೆಲೆ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.</p>.<p>ಇಲ್ಲಿನ ಕನಕ ಉದ್ಯಾನದಲ್ಲಿ ಸೋಮವಾರ ನಡೆದ 12 ಅಡಿ ಎತ್ತರದ ಕನಕದಾಸರ ಕಂಚಿನ ಮೂರ್ತಿಯ ಅನಾವರಣ ಹಾಗೂ ಆನಂತರ ಬಾಬುಜಗಜೀವನರಾಮ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಈ ಹಿಂದೆ ಕನಕ ಉದ್ಯಾನ ಉಳಿಸುವ ಹೋರಾಟದಲ್ಲಿ ಹಾನಗಲ್ನಲ್ಲಿ ಭಾಗವಹಿಸಿದ್ದೆ. ಇದು ನಮ್ಮ ಮೊದಲ ಹೋರಾಟವಾಗಿತ್ತು. ಹೀಗಾಗಿ ಇದೇ ಉದ್ಯಾನದಲ್ಲಿ ಕನಕದಾಸರ ಭವ್ಯ ಮೂರ್ತಿ ಅನಾವರಣಕ್ಕೆ ಆಗಮಿಸುವ ಸಂಕಲ್ಪದಿಂದ ಬಂದಿದ್ದೇನೆ’ ಎಂದರು.</p>.<p>ತಾಲ್ಲೂಕಿನ ಯಳವಟ್ಟಿ ಗ್ರಾಮದಲ್ಲಿರುವ ಕಾಗಿನೆಲೆ ಮಠದ ಜಾಗೆಯಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಶ್ರೀನಿವಾಸ ಮಾನೆ ಆಧ್ಯತೆ ನೀಡಬೇಕು ಎಂದು ಆಗ್ರಹಿಸಿದರು.</p>.<p>ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಕನಕದಾಸರ ಆದರ್ಶಗಳ ಪಾಲನೆಯಾಗಬೇಕು ಎಂಬ ಉದ್ದೇಶದಿಂದ ಪಟ್ಟಣದ ಮುಖ್ಯ ಭಾಗದಲ್ಲಿ ಕನಕದಾಸರ ಮೂರ್ತಿಯ ಪ್ರತಿಷ್ಠಾನವಾಗಿದೆ. ಕನಕದಾಸರ ಕಂಚಿನ ಮೂರ್ತಿ ಅನಾವರಣದ ಕನಸು ಇಂದು ನನಸಾಗಿದೆ. ಕಂಚಿನ ಮೂರ್ತಿ ಅದೊಂದು ಪ್ರತಿಮೆಯಲ್ಲ, ಅದು ಅವರ ಆದರ್ಶ, ಚಿಂತನೆ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ ಎಂದರು.</p>.<p>ಹೋತನಹಳ್ಳಿಯ ಸಿದ್ದಾರೂಢಮಠದ ಸದ್ಗುರು ಶಂಕರಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಪ್ರದೇಶ ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ ಪವಾಡಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಶಿವರಾಜ ಸಜ್ಜನರ, ಪ್ರಮುಖರಾದ ಯಲ್ಲಪ್ಪ ಕಿತ್ತೂರ, ಪ್ರಕಾಶಗೌಡ ಪಾಟೀಲ, ಭೋಜರಾಜ್ ಕರೂದಿ, ಎಂ.ಬಿ.ಕಲಾಲ, ಎ.ಎಸ್.ಬಳ್ಳಾರಿ, ನಾಗರಾಜ ಅನ್ವೇರಿ, ಸಿ.ಮಂಜುನಾಥ, ರಾಜೇಂದ್ರ ಹಾವೇರಣ್ಣನವರ, ರವಿ ಒಡೆಯರ, ಮಾಲತೇಶ ಬ್ಯಾಗವಾದಿ, ಸುರೇಶ ದೊಡ್ಡಕುರುಬರ ಇದ್ದರು. ದಾನಪ್ಪ ಗಂಟೇರ ಸ್ವಾಗತಿಸಿದರು. ವಿನಾಯಕ ಕುರುಬರ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260526-22-1597972968</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>