ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 8–5–1968

Last Updated 7 ಮೇ 2018, 19:30 IST
ಅಕ್ಷರ ಗಾತ್ರ

ಮಾರುಕಟ್ಟೆ ನಿಯಮಗಳ ವಿರುದ್ಧ ತರಗುಪೇಟೆ ವರ್ತಕರಿಂದ ಮತ್ತೆ ಹರತಾಳ

ಬೆಂಗಳೂರು, ಮೇ 7– 1966ರ ಮೈಸೂರು ವ್ಯವಸಾಯೋತ್ಪನ್ನ ಮಾರುಕಟ್ಟೆ ನಿಯಮಾವಳಿಗಳನ್ನು ವಿರೋಧಿಸಿ, ನಗರದ ಆಹಾರ ವಸ್ತುಗಳ ಪ್ರಮುಖ ವಹಿವಾಟಿನ ಕೇಂದ್ರವಾದ ತರಗುಪೇಟೆ ವ್ಯಾಪಾರಸ್ಥರು ಇಂದು ಮತ್ತೆ ಹರತಾಳವನ್ನು ಆಚರಿಸಿದರು.

ಸದ್ಯಕ್ಕೆ ಹೆಚ್.ಎಂ.ಟಿ. ಹೊಸ ವಿಸ್ತರಣೆ ಇಲ್ಲ

ನವದೆಹಲಿ, ಮೇ 7– ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶಗಳಲ್ಲಿ ಎರಡು ಹೊಸ ಶಾಖೆಗಳನ್ನು ತೆರೆಯಬೇಕೆಂಬ ತನ್ನ ನಿರ್ಧಾರವನ್ನು ಬೆಂಗಳೂರು ಹಿಂದೂಸ್ತಾನ್ ಕಾರ್ಖಾನೆಯು ಮುಂದಕ್ಕೆ ಹಾಕಿದೆ.

ಈಗಿರುವ ಪಂಜಾಬ್, ಕೇರಳ ಮತ್ತು ಆಂಧ್ರ ಕಾರ್ಖಾನೆಗಳ ವಿಸ್ತರಣೆಯನ್ನೂ ಸಹ ಮುಂದೂಡಲಾಗಿದೆ.

ಪಾಕಿಸ್ತಾನದಲ್ಲಿನ ಭಾರತೀಯರ ಹೋಟಲು ‘ಶತ್ರುವಿನ ಆಸ್ತಿ’: ದಿನೇಶ್‌ಸಿಂಗ್ ವಿವರಣೆ

ನವದೆಹಲಿ, ಮೇ 7– ಪಶ್ಚಿಮ ಪಾಕಿಸ್ತಾನದಲ್ಲಿರುವ ನಾಲ್ಕು ಭಾರತೀಯ ಮಾಲೀಕತ್ವದ ಹೋಟಲುಗಳನ್ನು ಪಾಕಿಸ್ತಾನ ಶತ್ರುಗಳ ಆಸ್ತಿಯೆಂದು ಘೋಷಿಸಿದೆ.

ಇಂದು ಲೋಕಸಭೆಯಲ್ಲಿ ಈ ವಿಷಯವನ್ನು ಸ್ಥಿರಪಡಿಸಿದ ವಾಣಿಜ್ಯ ಶಾಖೆ ಸಚಿವ ಶ್ರೀ ದಿನೇಶ್ ಸಿಂಗ್ ಅವರು ಪಾಕಿಸ್ತಾನದ ಈ ಕ್ರಮಕ್ಕೆ ಭಾರತ ಉಗ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆಯೆಂದು ಹೇಳಿದರು.

ಪ್ರಾವಿಡೆಂಟ್ ಫಂಡ್ ಹಣದ ದುರುಪಯೋಗ ಮಾಡುವ ಸಂಸ್ಥೆಗಳ ಮೇಲೆ ಕ್ರಮ

ನವದೆಹಲಿ, ಮೇ 7– ಕೆಲಸಗಾರರ ಕ್ಷೇಮನಿಧಿ ಹಣವನ್ನು ದುರುಪಯೋಗ ಮಾಡಿಕೊಂಡಿರುವ ಕಂಪನಿಗಳಿಗೆ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ಸಾಲಗಳನ್ನು ಮತ್ತು ಓವರ್ ಡ್ರಾಫ್ಟ್‌
ಗಳನ್ನು ಮಂಜೂರು ಮಾಡಿರುವುದರ ಬಗ್ಗೆ ರಾಜ್ಯಸಭೆಯಲ್ಲಿ ಕೆಲವು ಸದಸ್ಯರು ದೂರಿದರು.

ಇಂತಹ ಮಂಜೂರಾತಿಗಳನ್ನು ಮಾಡಬಾರದೆಂದು ಬ್ಯಾಂಕಿಗೆ ಸರ್ಕಾರ ಸಲಹೆ ಮಾಡಲಿಲ್ಲವೇಕೆ ಎಂದು ಅರ್ಜುನ ಅರೋರ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT