<p>ಹಿರೇಕೆರೂರ: ಜೈ ಜವಾನ್ ಜೈ ಕಿಸಾನ್ ಎಂಬ ಉಕ್ತಿಯಂತೆ ದೇಶ ಕಾಯುವ ಯೋಧ, ದೇಶಕ್ಕೆ ಅನ್ನ ನೀಡುವ ರೈತ ಈ ಮಣ್ಣಿನ ಉಸಿರು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.</p>.<p>42 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಪಡೆದು ಸ್ವ–ಗ್ರಾಮವಾದ ತಾಲ್ಲೂಕಿನ ಆಲದಗೇರಿ ಗ್ರಾಮದಲ್ಲಿ ಈಚೆಗೆ ಗ್ರಾಮಕ್ಕೆ ಆಗಮಿಸಿದ ರೇವಣಪ್ಪ ದ್ಯಾಮಕ್ಕನವರ ಅವರ ಸ್ವಾಗತ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.</p>.<p>ಭಾರತವು ಜಗತ್ತಿನ ಬಲಿಷ್ಠ ರಾಷ್ಟ್ರವಾಗಿ ರೂಪುಗೊಳ್ಳಲು ಯೋಧರ ಪರಿಶ್ರಮವಿದೆ. ಯುವಜನರು ದುಃಶ್ಚಟಗಳಿಗೆ ದಾಸರಾಗದೆ ದೇಶ, ಸಮಾಜ ಸೇವೆಯಲ್ಲಿ ನಿರತರಾಗಬೇಕು ಎಂದು ಹೇಳಿದರು .</p>.<p>‘ಈ ನಿಟ್ಟಿನಲ್ಲಿ ಆಲದಗೇರಿ ಗ್ರಾಮದ ನಮ್ಮ ಮನೆ ಮಗ ರೇವಣಪ್ಪ ದ್ಯಾಮಕ್ಕನವರ ಸುದೀರ್ಘ 42 ವರ್ಷಗಳ ಕಾಲ ದೇಶದ ಗಡಿಭಾಗಗಳನ್ನು ಕಾಯ್ದು ನಿವೃತ್ತರಾಗಿ ಹುಟ್ಟೂರಿನಲ್ಲಿ ಅದ್ದೂರಿಯಾಗಿ ಸನ್ಮಾನಿತರಾಗಿರುವುದು ಎಲ್ಲಾ ಪದವಿಗಿಂತ ದೊಡ್ಡದು. ಅವರ ಈ ಸೇವೆ ಇಂದಿನ ಯುವಕರಿಗೆ ಪ್ರೇರಣೆಯಾಗಬೇಕು’ ಎಂದರು.</p>.<p>ಇಂದಿನ ಮಕ್ಕಳಿಗೆ ವಾಘಾ ಗಡಿ ಪ್ರದೇಶದಲ್ಲಿ ನಡೆಯುವ ಖವಾಯಿತ ಪ್ರದರ್ಶನ ತೋರಿಸುವ ಮೂಲಕ ದೇಶಭಕ್ತಿ ಪ್ರೇಮವನ್ನು ಹೆಚ್ಚಿಸಬೇಕು. ಈ ದೇಶ ಸೇವೆಗೆ ತನ್ನ ಪತಿ ಮಕ್ಕಳನ್ನು ಕಳಿಸಿ ಒಂಟಿ ಜೀವನ ನಡೆಸಿದ ರೇಣುಕವ್ವ ರೇವಣಪ್ಪ ದ್ಯಾಮಕ್ಕನವರ ಧೈರ್ಯವನ್ನು ನಾವೆಲ್ಲರೂ ಮೆಚ್ಚಿಕೊಳ್ಳಬೇಕು . ಈ ನಿಟ್ಟಿನಲ್ಲಿ ಎಲ್ಲ ತಾಯಂದಿರು ತಮ್ಮ ಮಕ್ಕಳನ್ನು ದೇಶ ಸೇವೆಗೆ ಕಳಿಸಲು ಯಾವತ್ತು ಹಿಂದೇಟು ಹಾಕದೆ ದೇಶ ಪ್ರೇಮವನ್ನು ತುಂಬಬೇಕು ಎಂದರು.</p>.<p>ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಮಂಜುನಾಥ ಚಲವಾದಿ , ಭಾರತ ದೇಶ ನೌಕಾಪಡೆ , ವಾಯುಸೇನೆ, ಭೂಸೇನೆ ಮೂರು ಪ್ರಮುಖ ಅಂಗಗಳು ದೇಶವನ್ನು ರಕ್ಷಿಸುವಲ್ಲಿ ಸಮರ್ಥವಾಗಿವೆ. ಈ ನಿಟ್ಟಿನಲ್ಲಿ ಈ ಗ್ರಾಮದ ಮಣ್ಣಿನ ಮಗ 42 ವರ್ಷ ದೇಶ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕಾರಣ ಹಬ್ಬದ ರೀತಿಯಲ್ಲಿ ಗ್ರಾಮಸ್ಥರು ಸೇರಿ ಸನ್ಮಾನಿಸಿದ ಹಿರಿಮೆ ದೊಡ್ಡದು ಅವರ ದೇಶಭಕ್ತಿಯನ್ನು ನಾವೆಲ್ಲರೂ ಮೆಚ್ಚಿ ಕೊಳ್ಳಬೇಕು ಎಂದರು.</p>.<p>ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೇಣುಕವ್ವ ರೇವಣೇಪ್ಪ ದ್ಯಾಮಕ್ಕನವರ ವಹಿಸಿದ್ದರು.</p>.<p>ತಾಲ್ಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಸಂಜೀವಯ್ಯ ಕಬ್ಬಿಣಕಂತಿಮಠ, ಪ್ರಕಾಶ ಗೌಡರ, ರವಿ ಬಾಳಿಕಾಯಿ, ಸೈನಿಕರಾದ ರಾಘು ದ್ಯಾಮಕ್ಕನವರ , ಮಹೇಶ ಕರಬುಳ್ಳವರ , ಚೌಡಪ್ಪ ದ್ಯಾಮಕ್ಕಳವರ , ಮಂಜುನಾಥ ದ್ಯಾಮಕ್ಕನವರ, ವಿನಾಯಕ ಗೌಡರ, ಚಂದ್ರಪ್ಪ ಬೂತನವರ, ಶಿವರಾಜಕುಮಾರ ಯಡಚಿ, ಕುಬೇರಪ್ಪ ಗೌಡರ, ಕುಮಾರ ಮಾಸಣಗಿ, ಬಸನಗೌಡ ಗೌಡರ, ಕರಿಯಪ್ಪ ಚಲವಾದಿ, ರಾಜು ಹುಬ್ಬಳ್ಳಿ ಮತ್ತು ಇತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260511-22-1299144822</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಿರೇಕೆರೂರ: ಜೈ ಜವಾನ್ ಜೈ ಕಿಸಾನ್ ಎಂಬ ಉಕ್ತಿಯಂತೆ ದೇಶ ಕಾಯುವ ಯೋಧ, ದೇಶಕ್ಕೆ ಅನ್ನ ನೀಡುವ ರೈತ ಈ ಮಣ್ಣಿನ ಉಸಿರು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.</p>.<p>42 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಪಡೆದು ಸ್ವ–ಗ್ರಾಮವಾದ ತಾಲ್ಲೂಕಿನ ಆಲದಗೇರಿ ಗ್ರಾಮದಲ್ಲಿ ಈಚೆಗೆ ಗ್ರಾಮಕ್ಕೆ ಆಗಮಿಸಿದ ರೇವಣಪ್ಪ ದ್ಯಾಮಕ್ಕನವರ ಅವರ ಸ್ವಾಗತ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.</p>.<p>ಭಾರತವು ಜಗತ್ತಿನ ಬಲಿಷ್ಠ ರಾಷ್ಟ್ರವಾಗಿ ರೂಪುಗೊಳ್ಳಲು ಯೋಧರ ಪರಿಶ್ರಮವಿದೆ. ಯುವಜನರು ದುಃಶ್ಚಟಗಳಿಗೆ ದಾಸರಾಗದೆ ದೇಶ, ಸಮಾಜ ಸೇವೆಯಲ್ಲಿ ನಿರತರಾಗಬೇಕು ಎಂದು ಹೇಳಿದರು .</p>.<p>‘ಈ ನಿಟ್ಟಿನಲ್ಲಿ ಆಲದಗೇರಿ ಗ್ರಾಮದ ನಮ್ಮ ಮನೆ ಮಗ ರೇವಣಪ್ಪ ದ್ಯಾಮಕ್ಕನವರ ಸುದೀರ್ಘ 42 ವರ್ಷಗಳ ಕಾಲ ದೇಶದ ಗಡಿಭಾಗಗಳನ್ನು ಕಾಯ್ದು ನಿವೃತ್ತರಾಗಿ ಹುಟ್ಟೂರಿನಲ್ಲಿ ಅದ್ದೂರಿಯಾಗಿ ಸನ್ಮಾನಿತರಾಗಿರುವುದು ಎಲ್ಲಾ ಪದವಿಗಿಂತ ದೊಡ್ಡದು. ಅವರ ಈ ಸೇವೆ ಇಂದಿನ ಯುವಕರಿಗೆ ಪ್ರೇರಣೆಯಾಗಬೇಕು’ ಎಂದರು.</p>.<p>ಇಂದಿನ ಮಕ್ಕಳಿಗೆ ವಾಘಾ ಗಡಿ ಪ್ರದೇಶದಲ್ಲಿ ನಡೆಯುವ ಖವಾಯಿತ ಪ್ರದರ್ಶನ ತೋರಿಸುವ ಮೂಲಕ ದೇಶಭಕ್ತಿ ಪ್ರೇಮವನ್ನು ಹೆಚ್ಚಿಸಬೇಕು. ಈ ದೇಶ ಸೇವೆಗೆ ತನ್ನ ಪತಿ ಮಕ್ಕಳನ್ನು ಕಳಿಸಿ ಒಂಟಿ ಜೀವನ ನಡೆಸಿದ ರೇಣುಕವ್ವ ರೇವಣಪ್ಪ ದ್ಯಾಮಕ್ಕನವರ ಧೈರ್ಯವನ್ನು ನಾವೆಲ್ಲರೂ ಮೆಚ್ಚಿಕೊಳ್ಳಬೇಕು . ಈ ನಿಟ್ಟಿನಲ್ಲಿ ಎಲ್ಲ ತಾಯಂದಿರು ತಮ್ಮ ಮಕ್ಕಳನ್ನು ದೇಶ ಸೇವೆಗೆ ಕಳಿಸಲು ಯಾವತ್ತು ಹಿಂದೇಟು ಹಾಕದೆ ದೇಶ ಪ್ರೇಮವನ್ನು ತುಂಬಬೇಕು ಎಂದರು.</p>.<p>ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಮಂಜುನಾಥ ಚಲವಾದಿ , ಭಾರತ ದೇಶ ನೌಕಾಪಡೆ , ವಾಯುಸೇನೆ, ಭೂಸೇನೆ ಮೂರು ಪ್ರಮುಖ ಅಂಗಗಳು ದೇಶವನ್ನು ರಕ್ಷಿಸುವಲ್ಲಿ ಸಮರ್ಥವಾಗಿವೆ. ಈ ನಿಟ್ಟಿನಲ್ಲಿ ಈ ಗ್ರಾಮದ ಮಣ್ಣಿನ ಮಗ 42 ವರ್ಷ ದೇಶ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕಾರಣ ಹಬ್ಬದ ರೀತಿಯಲ್ಲಿ ಗ್ರಾಮಸ್ಥರು ಸೇರಿ ಸನ್ಮಾನಿಸಿದ ಹಿರಿಮೆ ದೊಡ್ಡದು ಅವರ ದೇಶಭಕ್ತಿಯನ್ನು ನಾವೆಲ್ಲರೂ ಮೆಚ್ಚಿ ಕೊಳ್ಳಬೇಕು ಎಂದರು.</p>.<p>ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೇಣುಕವ್ವ ರೇವಣೇಪ್ಪ ದ್ಯಾಮಕ್ಕನವರ ವಹಿಸಿದ್ದರು.</p>.<p>ತಾಲ್ಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಸಂಜೀವಯ್ಯ ಕಬ್ಬಿಣಕಂತಿಮಠ, ಪ್ರಕಾಶ ಗೌಡರ, ರವಿ ಬಾಳಿಕಾಯಿ, ಸೈನಿಕರಾದ ರಾಘು ದ್ಯಾಮಕ್ಕನವರ , ಮಹೇಶ ಕರಬುಳ್ಳವರ , ಚೌಡಪ್ಪ ದ್ಯಾಮಕ್ಕಳವರ , ಮಂಜುನಾಥ ದ್ಯಾಮಕ್ಕನವರ, ವಿನಾಯಕ ಗೌಡರ, ಚಂದ್ರಪ್ಪ ಬೂತನವರ, ಶಿವರಾಜಕುಮಾರ ಯಡಚಿ, ಕುಬೇರಪ್ಪ ಗೌಡರ, ಕುಮಾರ ಮಾಸಣಗಿ, ಬಸನಗೌಡ ಗೌಡರ, ಕರಿಯಪ್ಪ ಚಲವಾದಿ, ರಾಜು ಹುಬ್ಬಳ್ಳಿ ಮತ್ತು ಇತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260511-22-1299144822</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>