<p>ಹಿರೇಕೆರೂರ: ‘ಅಪಘಾತದಿಂದ ಹಾಗೂ ಕಾಯಿಲೆಯಿಂದ ಪ್ರಾಣಾಪಾಯದಲ್ಲಿ ಇರುವವರ ಜೀವ ಉಳಿಸಲು ರಕ್ತದಾನ ಮಹತ್ತರ ಪಾತ್ರ ವಹಿಸುತ್ತದೆ. ರಕ್ತದಾನ ಮಾಡಲು ಜನರು ಮುಂದೆ ಬರಬೇಕು’ ಎಂದು ಹಾವೇರಿ ಜಿಲ್ಲಾ ರಕ್ತ ನಿಧಿಯ ವೈದ್ಯಾಧಿಕಾರಿ ಡಾ.ಬಸವರಾಜ ತಳವಾರ ಹೇಳಿದರು.</p>.<p>ತಾಲ್ಲೂಕಿನ ಚನ್ನಳ್ಳಿ ತಾಂಡದಲ್ಲಿ ತುಳಜಾಭವಾನಿ ಭವಾನಿ ದೇವಿಯ 5ನೇ ವರ್ಷದ ಪ್ರತಿಷ್ಠಾಪನೆ ಮತ್ತು ಅನ್ನ ಸಂತರ್ಪಣೆಯ ಪ್ರಯುಕ್ತ ಈಚೆಗೆ ಹಾವೇರಿ ಜಿಲ್ಲಾ ರಕ್ತ ನಿಧಿಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಸಂತ ಸೇವಾಲಾಲ್ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಹುತ್ತೇಶ ಲಮಾಣಿ, ‘ಆರೋಗ್ಯ ಕ್ಷೇತ್ರದಲ್ಲಿ ಅಗಾಧವಾದ ಬದಲಾವಣೆಗಳಾಗಿದ್ದರೂ ಸಾಕಷ್ಟು ಜನರಲ್ಲಿ ರಕ್ತದಾನ ಕುರಿತು ಇನ್ನೂ ಮೂಢನಂಬಿಕೆ, ತಪ್ಪು ಕಲ್ಪನೆಗಳಿವೆ’ ಎಂದರು.</p>.<p>ಶಿಬಿರದಲ್ಲಿ 30 ಜನ ರಕ್ತದಾನ ಮಾಡಿದರು. 2 ಮಹಿಳಾ ರಕ್ತದಾನಿ ಗಳು ರಕ್ತದಾನ ಮಾಡುವ ಮೂಲಕ ಮಹಿಳೆಯರಿಗೆ ಮಾದರಿಯಾದರು. ರಕ್ತದಾನಿಗಳಿಗೆ ಜಿಲ್ಲಾ ರಕ್ತ ನಿಧಿಯಿಂದ ಪ್ರಮಾಣ ಪತ್ರ ವಿತರಿಸಲಾಯಿತು.</p>.<p>ಶಿಬಿರದಲ್ಲಿ ‘ಏಡ್ಸ್ ಭಯ ಬೇಡ - ಎಚ್ಚರಿಕೆ ಇರಲಿ’ ಎಂಬ ವಿಷಯದ ಕುರಿತು ಮತ್ತು ರಕ್ತದಾನದ ಬಗ್ಗೆ ತಾಲ್ಲೂಕು ಆಸ್ಪತ್ರೆಯ ಆಪ್ತಸಮಾಲೋಚಕ ಜಯಪ್ಪ ಬಿದರಿ ಉಪನ್ಯಾಸ ನೀಡಿದರು. ಜಿಲ್ಲಾ ರಕ್ತ ನಿಧಿಯ ಸಿಬ್ಬಂದ್ದಿ ಸಿದ್ದು ಹಿರಿಗಣ್ಣವರ, ರೇವಣಸಿದ್ದಪ್ಪ ತೆಂಬದ್ , ಶ್ರೀನಿವಾಸ್ ,ಶೇಖಪ್ಪ ಥಾ ಲಮಾಣಿ,ತಿಪ್ಪವ್ವ ಲಮಾಣಿ, ಚಂಕಾ ಲಮಾಣಿ , ಭರತ್ ಮರಡಿ, ನಂದೇಪ್ಪ ಮಂಗ್ಲೇಪ್ಪ ಲಮಾಣಿ, ಸುನಿಲ್ ಲಮಾಣಿ, ಶೇಖಪ್ಪ ಲಮಾಣಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260324-22-1863147252</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಿರೇಕೆರೂರ: ‘ಅಪಘಾತದಿಂದ ಹಾಗೂ ಕಾಯಿಲೆಯಿಂದ ಪ್ರಾಣಾಪಾಯದಲ್ಲಿ ಇರುವವರ ಜೀವ ಉಳಿಸಲು ರಕ್ತದಾನ ಮಹತ್ತರ ಪಾತ್ರ ವಹಿಸುತ್ತದೆ. ರಕ್ತದಾನ ಮಾಡಲು ಜನರು ಮುಂದೆ ಬರಬೇಕು’ ಎಂದು ಹಾವೇರಿ ಜಿಲ್ಲಾ ರಕ್ತ ನಿಧಿಯ ವೈದ್ಯಾಧಿಕಾರಿ ಡಾ.ಬಸವರಾಜ ತಳವಾರ ಹೇಳಿದರು.</p>.<p>ತಾಲ್ಲೂಕಿನ ಚನ್ನಳ್ಳಿ ತಾಂಡದಲ್ಲಿ ತುಳಜಾಭವಾನಿ ಭವಾನಿ ದೇವಿಯ 5ನೇ ವರ್ಷದ ಪ್ರತಿಷ್ಠಾಪನೆ ಮತ್ತು ಅನ್ನ ಸಂತರ್ಪಣೆಯ ಪ್ರಯುಕ್ತ ಈಚೆಗೆ ಹಾವೇರಿ ಜಿಲ್ಲಾ ರಕ್ತ ನಿಧಿಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಸಂತ ಸೇವಾಲಾಲ್ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಹುತ್ತೇಶ ಲಮಾಣಿ, ‘ಆರೋಗ್ಯ ಕ್ಷೇತ್ರದಲ್ಲಿ ಅಗಾಧವಾದ ಬದಲಾವಣೆಗಳಾಗಿದ್ದರೂ ಸಾಕಷ್ಟು ಜನರಲ್ಲಿ ರಕ್ತದಾನ ಕುರಿತು ಇನ್ನೂ ಮೂಢನಂಬಿಕೆ, ತಪ್ಪು ಕಲ್ಪನೆಗಳಿವೆ’ ಎಂದರು.</p>.<p>ಶಿಬಿರದಲ್ಲಿ 30 ಜನ ರಕ್ತದಾನ ಮಾಡಿದರು. 2 ಮಹಿಳಾ ರಕ್ತದಾನಿ ಗಳು ರಕ್ತದಾನ ಮಾಡುವ ಮೂಲಕ ಮಹಿಳೆಯರಿಗೆ ಮಾದರಿಯಾದರು. ರಕ್ತದಾನಿಗಳಿಗೆ ಜಿಲ್ಲಾ ರಕ್ತ ನಿಧಿಯಿಂದ ಪ್ರಮಾಣ ಪತ್ರ ವಿತರಿಸಲಾಯಿತು.</p>.<p>ಶಿಬಿರದಲ್ಲಿ ‘ಏಡ್ಸ್ ಭಯ ಬೇಡ - ಎಚ್ಚರಿಕೆ ಇರಲಿ’ ಎಂಬ ವಿಷಯದ ಕುರಿತು ಮತ್ತು ರಕ್ತದಾನದ ಬಗ್ಗೆ ತಾಲ್ಲೂಕು ಆಸ್ಪತ್ರೆಯ ಆಪ್ತಸಮಾಲೋಚಕ ಜಯಪ್ಪ ಬಿದರಿ ಉಪನ್ಯಾಸ ನೀಡಿದರು. ಜಿಲ್ಲಾ ರಕ್ತ ನಿಧಿಯ ಸಿಬ್ಬಂದ್ದಿ ಸಿದ್ದು ಹಿರಿಗಣ್ಣವರ, ರೇವಣಸಿದ್ದಪ್ಪ ತೆಂಬದ್ , ಶ್ರೀನಿವಾಸ್ ,ಶೇಖಪ್ಪ ಥಾ ಲಮಾಣಿ,ತಿಪ್ಪವ್ವ ಲಮಾಣಿ, ಚಂಕಾ ಲಮಾಣಿ , ಭರತ್ ಮರಡಿ, ನಂದೇಪ್ಪ ಮಂಗ್ಲೇಪ್ಪ ಲಮಾಣಿ, ಸುನಿಲ್ ಲಮಾಣಿ, ಶೇಖಪ್ಪ ಲಮಾಣಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260324-22-1863147252</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>