<p><strong>ಹಾವೇರಿ</strong>: ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಗೆ ನಿತ್ಯವೂ ಸಾವಿರಾರು ಬಸ್ಗಳು ಬಂದು ಹೋಗುತ್ತಿದ್ದು, ಪ್ರಯಾಣಿಕರ ದಟ್ಟಣೆಯ ಕೇಂದ್ರವೂ ಆಗಿದೆ. ಬಸ್ಗಳ ನಿಲುಗಡೆಗಾಗಿ ನಿರ್ಮಿಸಿರುವ ಹಾವೇರಿ ಕೇಂದ್ರ ನಿಲ್ದಾಣದಲ್ಲಿ ಪಾರ್ಕಿಂಗ್ ಹೆಸರಿನಲ್ಲಿ ಹಗಲು ಸುಲಿಗೆ ನಡೆಯುತ್ತಿದ್ದು, ಇದರ ವಿರುದ್ಧ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.</p>.<p>ಉದ್ಯೋಗ ಸೇರಿ ಇತರೆ ಕೆಲಸಗಳಿಗೆ ಹೋಗಿ ಬರಲು ಜನರು, ಬಸ್ಗಳನ್ನು ಅವಲಂಬಿಸಿದ್ದಾರೆ. ಬಹುತೇಕ ಪ್ರಯಾಣಿಕರು, ನಿಲ್ದಾಣದವರೆಗೂ ತಮ್ಮ ಸ್ವಂತ ವಾಹನದಲ್ಲಿ ಬಂದು ಅದನ್ನು ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿ ಬಸ್ಗಳಲ್ಲಿ ಪ್ರಯಾಣಿಸುತ್ತಾರೆ. ಇಂಥ ಪ್ರಯಾಣಿಕರ ಅನುಕೂಲಕ್ಕಾಗಿ, ಬೈಕ್ ಹಾಗೂ ಕಾರುಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇದರ ನಿರ್ವಹಣೆ ವಹಿಸಿಕೊಂಡಿರುವ ಖಾಸಗಿ ವ್ಯಕ್ತಿಗಳು, ತಮ್ಮಿಷ್ಟದಂತೆ ಶುಲ್ಕ ವಸೂಲಿ ಮಾಡುತ್ತಿರುವ ಆರೋಪ ವ್ಯಕ್ತವಾಗಿದೆ.</p>.<p>ಹಾವೇರಿ ಕೇಂದ್ರ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ನಿತ್ಯವೂ 100ಕ್ಕೂ ಹೆಚ್ಚು ಬೈಕ್ಗಳು ಹಾಗೂ 20ಕ್ಕೂ ಹೆಚ್ಚು ಕಾರುಗಳನ್ನು ಜನರು ನಿಲ್ಲಿಸುತ್ತಾರೆ. ಕೆಲಸ ನಿಮಿತ್ತ ಬೇರೆ ಊರಿಗೆ ಹೋಗಿ ಬರುತ್ತಾರೆ. ಕೆಲವರು, ಸಂಬಂಧಿಕರು ಹಾಗೂ ಪರಿಚಯಸ್ಥರನ್ನು ಬಸ್ಗೆ ಹತ್ತಿಸಲು ಬಂದಿರುತ್ತಾರೆ. ಕೆಲವರು, ಅರ್ಧ ಅಥವಾ ಒಂದು ಗಂಟೆಯಷ್ಟೇ ವಾಹನ ನಿಲ್ಲಿಸಿ ಸಮೀಪದ ಊರುಗಳಿಗೆ ಬಸ್ನಲ್ಲಿ ಹೋಗಿ ವಾಪಸು ಬರುತ್ತಾರೆ.</p>.<p>ವಾಹನ ನಿಲ್ಲಿಸುವ ಎಲ್ಲರಿಂದಲೂ ಕನಿಷ್ಠ ₹ 24 ಲೆಕ್ಕದಲ್ಲಿ ಒಂದೇ ದರವನ್ನು ವಸೂಲಿ ಮಾಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪಾರ್ಕಿಂಗ್ ಜಾಗದಲ್ಲಿ ಯಾರಾದರೂ ವಾಹನ ನಿಲ್ಲಿಸಿದರೆ, ಅವರಿಂದ ಕನಿಷ್ಠ 8 ಗಂಟೆ ಲೆಕ್ಕದಲ್ಲಿ ₹ 24 ವಸೂಲಿ ಮಾಡಲಾಗುತ್ತಿದೆ. 1 ಗಂಟೆ ವಾಹನ ನಿಲ್ಲಿಸಿದರೂ ಹಾಗೂ 8 ಗಂಟೆ ವಾಹನ ನಿಲ್ಲಿಸಿದರೂ ಎಲ್ಲರಿಂದಲೂ ಅಕ್ರಮವಾಗಿ ಕನಿಷ್ಠ ₹ 24 ವಸೂಲಿ ಮಾಡುತ್ತಿರುವ ಬಗ್ಗೆ ಜನರು ದೂರುತ್ತಿದ್ದಾರೆ.</p>.<p>ಟೆಂಡರ್ ನಿಯಮ ಉಲ್ಲಂಘನೆ: ಕೇಂದ್ರ ನಿಲ್ದಾಣದ ಪಾರ್ಕಿಂಗ್ ನಿರ್ವಹಣೆಯನ್ನು 2024ರಲ್ಲಿ ಬೇರೊಬ್ಬರ ಗುತ್ತಿಗೆದಾ ರನಿಗೆ ವಹಿಸಲಾಗಿತ್ತು. ಗುತ್ತಿಗೆ ಅವಧಿ ಮುಗಿದರೂ ಅಕ್ರಮವಾಗಿ ಶುಲ್ಕ ವಸೂಲಿ ಮಾಡುತ್ತಿದ್ದ. ಉಪ ಲೋಕಾಯುಕ್ತರ ಭೇಟಿಯಿಂದ ಅಕ್ರಮ ಪತ್ತೆಯಾಗಿತ್ತು. ಗುತ್ತಿಗೆಯನ್ನು ರದ್ದುಪಡಿಸಿ ವಾಕರಸಾಸಂ ಸಿಬ್ಬಂದಿಯೇ ಪಾರ್ಕಿಂಗ್ ನಿರ್ವಹಣೆ ಮಾಡುತ್ತಿದ್ದರು.</p>.<p>ಕೆಲ ತಿಂಗಳ ನಂತರ, ಮತ್ತೊಬ್ಬ ಗುತ್ತಿಗೆದಾರನಿಗೆ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ. ಟೆಂಡರ್ ನೀಡುವ ಸಂದರ್ಭದಲ್ಲಿ ಶುಲ್ಕ ಹಾಗೂ ವಾಹನಗಳ ಭದ್ರತೆ ಬಗ್ಗೆ ಷರತ್ತು ವಿಧಿಸಲಾಗಿದೆ. ಬಹುತೇಕ ಷರತ್ತುಗಳನ್ನು ಉಲ್ಲಂಘನೆ ಮಾಡಿರುವ ಸದ್ಯದ ಗುತ್ತಿಗೆದಾರ, ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವುದಾಗಿ ಜನರು ದೂರುತ್ತಿದ್ದಾರೆ.</p>.<p>‘ಒಂದು ಗಂಟೆಗೆ ₹ 4, ನಾಲ್ಕು ಗಂಟೆಗೆ ₹6, 24 ಗಂಟೆಗೆ ₹10 ಹಾಗೂ 24 ಗಂಟೆಯ ಬಳಿಕ ₹20 ನಿಗದಿಪಡಿಸಲಾಗಿತ್ತು. ಆದರೆ, ಈಗ ಗಂಟೆಗಳ ಲೆಕ್ಕವೇ ಇಲ್ಲ. ಎಲ್ಲದಕ್ಕೂ ₹ 24 ವಸೂಲಿ ಮಾಡಲಾಗುತ್ತಿದೆ’ ಎಂದು ಬೈಕ್ ಸವಾರ ಮಂಜುನಾಥ ಆಕ್ರೋಶ ಹೊರಹಾಕಿದರು.</p>.<p>‘ಪಾರ್ಕಿಂಗ್ ಜಾಗದಲ್ಲಿ ಮಾ. 20ರಂದು ಬೆಳಿಗ್ಗೆ 9 ಗಂಟೆಗೆ ಬೈಕ್ ನಿಲ್ಲಿಸಿದ್ದೆ. ಒಂದೇ ಗಂಟೆ ನಿಲ್ಲಿಸುವುದಾಗಿ ಹೇಳಿದರೂ ₹ 24 ರಶೀದಿ ನೀಡಿದರು. ಗಂಟೆಗೆ ₹ 24 ಏಕೆ ಕೊಡಬೇಕೆಂದು ಪ್ರಶ್ನಿಸಿದೆ. ಸಿಬ್ಬಂದಿ, ಕಡ್ಡಾಯವೆಂದರು. ಕೆಲಸ ಇದ್ದಿದ್ದರಿಂದ ಸ್ಥಳದಿಂದ ಹೋಗಿ, ಗಂಟೆಯ ಬಳಿಕ ವಾಪಸು ಬಂದೆ. ಅವಾಗಲೂ ಸಿಬ್ಬಂದಿ, ₹24 ಕೊಟ್ಟೇ ವಾಹನ ಕೊಂಡೊಯ್ಯಬೇಕು ಎಂದು ಜಗಳ ತೆಗೆದರು. ರೌಡಿ ರೀತಿಯಲ್ಲಿ ವರ್ತಿಸಿದರು’ ಎಂದು ಅನುಭವ ಹಂಚಿಕೊಂಡರು.</p>.<p>‘ಪಾರ್ಕಿಂಗ್ನಲ್ಲಿ ಗಂಟೆಗಳ ಲೆಕ್ಕವೇ ಇಲ್ಲ. ಎಲ್ಲದಕ್ಕೂ ₹ 24 ಕಡ್ಡಾಯ ಮಾಡಿದ್ದಾರೆ. ಇದು ಹಗಲು ದರೋಡೆ. ಗುತ್ತಿಗೆದಾರ ಷರತ್ತು ಉಲ್ಲಂಘಿಸಿ ರಾಜಾರೋಷವಾಗಿ ಹಣ ಕೀಳುತ್ತಿದ್ದಾನೆ. ಇದನ್ನು ಪ್ರಶ್ನಿಸಿದರೆ, ಬೆದರಿಕೆಯೊಡ್ಡುತ್ತಿದ್ದಾರೆ’ ಎಂದು ದೂರಿದರು.</p>.<p>ಬೈಕ್ ಸವಾರ ರಂಜಿತ್ ಕಲ್ಲಸಂದ್ರ, ‘ಸಂಬಂಧಿಕರನ್ನು ಬಸ್ಗೆ ಹತ್ತಿಸಲು ಹೋದಾಗ, ಪಾರ್ಕಿಂಗ್ ಜಾಗದಲ್ಲಿ ಬೈಕ್ ನಿಲ್ಲಿಸಿದ್ದೆ. 15 ನಿಮಿಷಕ್ಕೆ ₹ 24 ಪಡೆದಿದ್ದಾರೆ. ಅದನ್ನು ಪ್ರಶ್ನಿಸಿದ್ದಕ್ಕೆ, ಅದುವೇ ಕನಿಷ್ಠ ಶುಲ್ಕವೆಂದು ವಾದಿಸಿ ನನ್ನನ್ನೇ ಬೆದರಿಸಿದರು’ ಎಂದು ತಿಳಿಸಿದರು.</p>.<p>ಶುಲ್ಕದ ಫಲಕವೇ ನಾಪತ್ತೆ: ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸುವ ವಾಹನಗಳಿಗೆ ಎಷ್ಟು ಗಂಟೆಗೆ ? ಎಷ್ಟು ಶುಲ್ಕ ? ವಿಧಿಸಬೇಕೆಂಬ ಫಲಕವಿದೆ. ಆದರೆ, ಈ ಫಲಕವೇ ಇದೀಗ ನಾಪತ್ತೆಯಾಗಿದೆ.</p>.<p>ಪಾರ್ಕಿಂಗ್ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿ, ಫಲಕವನ್ನೇ ಮುಚ್ಚಿದ್ದಾರೆ. ಫಲಕವಿದ್ದರೆ, ಜನರು ಪ್ರಶ್ನಿಸುತ್ತಾರೆಂಬ ಭಯ ಅವರಿಗಿದೆ. ಇದೇ ಫಲಕದ ವಿಚಾರವಾಗಿ ಜನರು ಹಾಗೂ ಸಿಬ್ಬಂದಿ ನಡುವೆ ಜಗಳವಾಗುತ್ತಿರುವ ಘಟನೆಗಳು ನಡೆಯುತ್ತಿವೆ. ವಾಕರಸಾಸಂ ಅಧಿಕಾರಿಗಳೇ, ಫಲಕ ನಿಲ್ಲಿಸಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.</p>.<p><strong>ಅಧಿಕಾರಿಗಳು ಶಾಮೀಲು: ಆರೋಪ</strong></p><p>ಸರ್ಕಾರಿ ಅಧಿಕಾರಿಗಳು, ಶಿಕ್ಷಕರು, ವ್ಯಾಪಾರಿಗಳು, ವಿದ್ಯಾರ್ಥಿಗಳು, ಖಾಸಗಿ ಕಂಪನಿ ಉದ್ಯೋಗಿಗಳು ಸೇರಿದಂತೆ ಹಲವರು ಪಾರ್ಕಿಂಗ್ ವ್ಯವಸ್ಥೆ ಬಳಸುತ್ತಿದ್ದಾರೆ. ಹೆಚ್ಚು ಸಮಯ ಬೈಕ್ ನಿಲ್ಲಿಸುವವರಿಂದ ನಿಗದಿತ ಶುಲ್ಕ ಪಡೆಯಲು ಯಾವುದೇ ಅಭ್ಯಂತರವಿಲ್ಲ. ಆದರೆ, ನಿಮಿಷ ಹಾಗೂ ಕೆಲ ಗಂಟೆಗಳ ಲೆಕ್ಕದಲ್ಲಿ ಬೈಕ್ ನಿಲ್ಲಿಸುವವರಿಂದಲೂ ₹ 24 ಪಡೆಯುವುದು ಯಾವ ನ್ಯಾಯ’ ಎಂದು ಹಾವೇರಿಯ ಮಲ್ಲಿಕಾರ್ಜುನ ಲಕ್ಕಮ್ಮಜ್ಜಪ್ಪನವರ ಪ್ರಶ್ನಿಸಿದರು.</p><p>‘ಪಾರ್ಕಿಂಗ್ ಶುಲ್ಕದ ಹೆಸರಿನಲ್ಲಿ ನಡೆಯುವ ಹಗಲು ದರೋಡೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಗುತ್ತಿಗೆದಾರರಷ್ಟೇ ಅಲ್ಲದೆ, ವಾಕರಸಾಸಂ ಕೆಲ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವ ಅನುಮಾನವಿದೆ. ಅದೇ ಕಾರಣಕ್ಕೆ, ಹಗಲು ದರೋಡೆ ನಡೆಯುತ್ತಿದ್ದರೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿಲ್ಲ. ದೂರು ಕೊಟ್ಟರೂ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.</p>.<p><strong>‘ಶುಲ್ಕ ಕೊಟ್ಟರೂ ಮಾಲೀಕರೇ ಜವಾಬ್ದಾರರು’</strong></p><p>ಪಾರ್ಕಿಂಗ್ ಜಾಗದಲ್ಲಿ ಬೈಕ್ಗಳ ರಕ್ಷಣೆಗಾಗಿ ಸೂಕ್ತ ಕ್ಯಾಮೆರಾ ಹಾಗೂ ಆಧುನಿಕ ಉಪಕರಣಗಳಿಲ್ಲ. ಪಾರ್ಕಿಂಗ್ ಶುಲ್ಕ ಪಡೆಯುವ ಗುತ್ತಿಗೆದಾರ, ‘ವಾಹನಗಳಿಗೆ ಮಾಲೀಕರೇ ಜವಾಬ್ದಾರಿ’ ಎಂದು ಹೇಳಿ ಜಾರಿಕೊಳ್ಳುತ್ತಿರುವುದಾಗಿ ಜನರು ದೂರುತ್ತಿದ್ದಾರೆ.</p><p>‘ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸುವ ವಾಹನಕ್ಕೆ ನಾವೇ ಜವಾಬ್ದಾರಿ ಎಂದರೆ, ಏಕೆ ಶುಲ್ಕ ಕಟ್ಟಬೇಕು. ಶುಲ್ಕ ಪಡೆದ ಗುತ್ತಿಗೆದಾರನ ಜವಾಬ್ದಾರಿ ಏನು?. ವಾಕರಸಾಸಂ ಮೇಲೆ ನಂಬಿಕೆ ಇಟ್ಟು ಬೈಕ್ ನಿಲ್ಲಿಸಿದರೆ, ಯಾರಾದರೂ ಕದ್ದುಕೊಂಡು ಹೋದರೆ ಯಾರು ಹೊಣೆ. ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಸೂಕ್ತ ನೀತಿಯನ್ನು ರೂಪಿಸಬೇಕು. ಬಸ್ ಪ್ರಯಾಣಿಕರ ವಾಹನಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.</p>.<div><blockquote>ಪಾರ್ಕಿಂಗ್ ಹೆಸರಿನಲ್ಲಿ ಹಗಲು ದರೋಡೆ ನಡೆಯುತ್ತಿದ್ದರೂ ವಾಕರಸಾಸಂ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ಮೌನವಾಗಿರುವುದು ವ್ಯವಸ್ಥೆಯನ್ನೇ ಅಣಕಿಸುವಂತಿದೆ </blockquote><span class="attribution"> ಸಂತೋಷ ಮರಂಡಗಿ, ಹಾವೇರಿ ನಿವಾಸಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ</strong>: ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಗೆ ನಿತ್ಯವೂ ಸಾವಿರಾರು ಬಸ್ಗಳು ಬಂದು ಹೋಗುತ್ತಿದ್ದು, ಪ್ರಯಾಣಿಕರ ದಟ್ಟಣೆಯ ಕೇಂದ್ರವೂ ಆಗಿದೆ. ಬಸ್ಗಳ ನಿಲುಗಡೆಗಾಗಿ ನಿರ್ಮಿಸಿರುವ ಹಾವೇರಿ ಕೇಂದ್ರ ನಿಲ್ದಾಣದಲ್ಲಿ ಪಾರ್ಕಿಂಗ್ ಹೆಸರಿನಲ್ಲಿ ಹಗಲು ಸುಲಿಗೆ ನಡೆಯುತ್ತಿದ್ದು, ಇದರ ವಿರುದ್ಧ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.</p>.<p>ಉದ್ಯೋಗ ಸೇರಿ ಇತರೆ ಕೆಲಸಗಳಿಗೆ ಹೋಗಿ ಬರಲು ಜನರು, ಬಸ್ಗಳನ್ನು ಅವಲಂಬಿಸಿದ್ದಾರೆ. ಬಹುತೇಕ ಪ್ರಯಾಣಿಕರು, ನಿಲ್ದಾಣದವರೆಗೂ ತಮ್ಮ ಸ್ವಂತ ವಾಹನದಲ್ಲಿ ಬಂದು ಅದನ್ನು ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿ ಬಸ್ಗಳಲ್ಲಿ ಪ್ರಯಾಣಿಸುತ್ತಾರೆ. ಇಂಥ ಪ್ರಯಾಣಿಕರ ಅನುಕೂಲಕ್ಕಾಗಿ, ಬೈಕ್ ಹಾಗೂ ಕಾರುಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇದರ ನಿರ್ವಹಣೆ ವಹಿಸಿಕೊಂಡಿರುವ ಖಾಸಗಿ ವ್ಯಕ್ತಿಗಳು, ತಮ್ಮಿಷ್ಟದಂತೆ ಶುಲ್ಕ ವಸೂಲಿ ಮಾಡುತ್ತಿರುವ ಆರೋಪ ವ್ಯಕ್ತವಾಗಿದೆ.</p>.<p>ಹಾವೇರಿ ಕೇಂದ್ರ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ನಿತ್ಯವೂ 100ಕ್ಕೂ ಹೆಚ್ಚು ಬೈಕ್ಗಳು ಹಾಗೂ 20ಕ್ಕೂ ಹೆಚ್ಚು ಕಾರುಗಳನ್ನು ಜನರು ನಿಲ್ಲಿಸುತ್ತಾರೆ. ಕೆಲಸ ನಿಮಿತ್ತ ಬೇರೆ ಊರಿಗೆ ಹೋಗಿ ಬರುತ್ತಾರೆ. ಕೆಲವರು, ಸಂಬಂಧಿಕರು ಹಾಗೂ ಪರಿಚಯಸ್ಥರನ್ನು ಬಸ್ಗೆ ಹತ್ತಿಸಲು ಬಂದಿರುತ್ತಾರೆ. ಕೆಲವರು, ಅರ್ಧ ಅಥವಾ ಒಂದು ಗಂಟೆಯಷ್ಟೇ ವಾಹನ ನಿಲ್ಲಿಸಿ ಸಮೀಪದ ಊರುಗಳಿಗೆ ಬಸ್ನಲ್ಲಿ ಹೋಗಿ ವಾಪಸು ಬರುತ್ತಾರೆ.</p>.<p>ವಾಹನ ನಿಲ್ಲಿಸುವ ಎಲ್ಲರಿಂದಲೂ ಕನಿಷ್ಠ ₹ 24 ಲೆಕ್ಕದಲ್ಲಿ ಒಂದೇ ದರವನ್ನು ವಸೂಲಿ ಮಾಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪಾರ್ಕಿಂಗ್ ಜಾಗದಲ್ಲಿ ಯಾರಾದರೂ ವಾಹನ ನಿಲ್ಲಿಸಿದರೆ, ಅವರಿಂದ ಕನಿಷ್ಠ 8 ಗಂಟೆ ಲೆಕ್ಕದಲ್ಲಿ ₹ 24 ವಸೂಲಿ ಮಾಡಲಾಗುತ್ತಿದೆ. 1 ಗಂಟೆ ವಾಹನ ನಿಲ್ಲಿಸಿದರೂ ಹಾಗೂ 8 ಗಂಟೆ ವಾಹನ ನಿಲ್ಲಿಸಿದರೂ ಎಲ್ಲರಿಂದಲೂ ಅಕ್ರಮವಾಗಿ ಕನಿಷ್ಠ ₹ 24 ವಸೂಲಿ ಮಾಡುತ್ತಿರುವ ಬಗ್ಗೆ ಜನರು ದೂರುತ್ತಿದ್ದಾರೆ.</p>.<p>ಟೆಂಡರ್ ನಿಯಮ ಉಲ್ಲಂಘನೆ: ಕೇಂದ್ರ ನಿಲ್ದಾಣದ ಪಾರ್ಕಿಂಗ್ ನಿರ್ವಹಣೆಯನ್ನು 2024ರಲ್ಲಿ ಬೇರೊಬ್ಬರ ಗುತ್ತಿಗೆದಾ ರನಿಗೆ ವಹಿಸಲಾಗಿತ್ತು. ಗುತ್ತಿಗೆ ಅವಧಿ ಮುಗಿದರೂ ಅಕ್ರಮವಾಗಿ ಶುಲ್ಕ ವಸೂಲಿ ಮಾಡುತ್ತಿದ್ದ. ಉಪ ಲೋಕಾಯುಕ್ತರ ಭೇಟಿಯಿಂದ ಅಕ್ರಮ ಪತ್ತೆಯಾಗಿತ್ತು. ಗುತ್ತಿಗೆಯನ್ನು ರದ್ದುಪಡಿಸಿ ವಾಕರಸಾಸಂ ಸಿಬ್ಬಂದಿಯೇ ಪಾರ್ಕಿಂಗ್ ನಿರ್ವಹಣೆ ಮಾಡುತ್ತಿದ್ದರು.</p>.<p>ಕೆಲ ತಿಂಗಳ ನಂತರ, ಮತ್ತೊಬ್ಬ ಗುತ್ತಿಗೆದಾರನಿಗೆ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ. ಟೆಂಡರ್ ನೀಡುವ ಸಂದರ್ಭದಲ್ಲಿ ಶುಲ್ಕ ಹಾಗೂ ವಾಹನಗಳ ಭದ್ರತೆ ಬಗ್ಗೆ ಷರತ್ತು ವಿಧಿಸಲಾಗಿದೆ. ಬಹುತೇಕ ಷರತ್ತುಗಳನ್ನು ಉಲ್ಲಂಘನೆ ಮಾಡಿರುವ ಸದ್ಯದ ಗುತ್ತಿಗೆದಾರ, ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವುದಾಗಿ ಜನರು ದೂರುತ್ತಿದ್ದಾರೆ.</p>.<p>‘ಒಂದು ಗಂಟೆಗೆ ₹ 4, ನಾಲ್ಕು ಗಂಟೆಗೆ ₹6, 24 ಗಂಟೆಗೆ ₹10 ಹಾಗೂ 24 ಗಂಟೆಯ ಬಳಿಕ ₹20 ನಿಗದಿಪಡಿಸಲಾಗಿತ್ತು. ಆದರೆ, ಈಗ ಗಂಟೆಗಳ ಲೆಕ್ಕವೇ ಇಲ್ಲ. ಎಲ್ಲದಕ್ಕೂ ₹ 24 ವಸೂಲಿ ಮಾಡಲಾಗುತ್ತಿದೆ’ ಎಂದು ಬೈಕ್ ಸವಾರ ಮಂಜುನಾಥ ಆಕ್ರೋಶ ಹೊರಹಾಕಿದರು.</p>.<p>‘ಪಾರ್ಕಿಂಗ್ ಜಾಗದಲ್ಲಿ ಮಾ. 20ರಂದು ಬೆಳಿಗ್ಗೆ 9 ಗಂಟೆಗೆ ಬೈಕ್ ನಿಲ್ಲಿಸಿದ್ದೆ. ಒಂದೇ ಗಂಟೆ ನಿಲ್ಲಿಸುವುದಾಗಿ ಹೇಳಿದರೂ ₹ 24 ರಶೀದಿ ನೀಡಿದರು. ಗಂಟೆಗೆ ₹ 24 ಏಕೆ ಕೊಡಬೇಕೆಂದು ಪ್ರಶ್ನಿಸಿದೆ. ಸಿಬ್ಬಂದಿ, ಕಡ್ಡಾಯವೆಂದರು. ಕೆಲಸ ಇದ್ದಿದ್ದರಿಂದ ಸ್ಥಳದಿಂದ ಹೋಗಿ, ಗಂಟೆಯ ಬಳಿಕ ವಾಪಸು ಬಂದೆ. ಅವಾಗಲೂ ಸಿಬ್ಬಂದಿ, ₹24 ಕೊಟ್ಟೇ ವಾಹನ ಕೊಂಡೊಯ್ಯಬೇಕು ಎಂದು ಜಗಳ ತೆಗೆದರು. ರೌಡಿ ರೀತಿಯಲ್ಲಿ ವರ್ತಿಸಿದರು’ ಎಂದು ಅನುಭವ ಹಂಚಿಕೊಂಡರು.</p>.<p>‘ಪಾರ್ಕಿಂಗ್ನಲ್ಲಿ ಗಂಟೆಗಳ ಲೆಕ್ಕವೇ ಇಲ್ಲ. ಎಲ್ಲದಕ್ಕೂ ₹ 24 ಕಡ್ಡಾಯ ಮಾಡಿದ್ದಾರೆ. ಇದು ಹಗಲು ದರೋಡೆ. ಗುತ್ತಿಗೆದಾರ ಷರತ್ತು ಉಲ್ಲಂಘಿಸಿ ರಾಜಾರೋಷವಾಗಿ ಹಣ ಕೀಳುತ್ತಿದ್ದಾನೆ. ಇದನ್ನು ಪ್ರಶ್ನಿಸಿದರೆ, ಬೆದರಿಕೆಯೊಡ್ಡುತ್ತಿದ್ದಾರೆ’ ಎಂದು ದೂರಿದರು.</p>.<p>ಬೈಕ್ ಸವಾರ ರಂಜಿತ್ ಕಲ್ಲಸಂದ್ರ, ‘ಸಂಬಂಧಿಕರನ್ನು ಬಸ್ಗೆ ಹತ್ತಿಸಲು ಹೋದಾಗ, ಪಾರ್ಕಿಂಗ್ ಜಾಗದಲ್ಲಿ ಬೈಕ್ ನಿಲ್ಲಿಸಿದ್ದೆ. 15 ನಿಮಿಷಕ್ಕೆ ₹ 24 ಪಡೆದಿದ್ದಾರೆ. ಅದನ್ನು ಪ್ರಶ್ನಿಸಿದ್ದಕ್ಕೆ, ಅದುವೇ ಕನಿಷ್ಠ ಶುಲ್ಕವೆಂದು ವಾದಿಸಿ ನನ್ನನ್ನೇ ಬೆದರಿಸಿದರು’ ಎಂದು ತಿಳಿಸಿದರು.</p>.<p>ಶುಲ್ಕದ ಫಲಕವೇ ನಾಪತ್ತೆ: ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸುವ ವಾಹನಗಳಿಗೆ ಎಷ್ಟು ಗಂಟೆಗೆ ? ಎಷ್ಟು ಶುಲ್ಕ ? ವಿಧಿಸಬೇಕೆಂಬ ಫಲಕವಿದೆ. ಆದರೆ, ಈ ಫಲಕವೇ ಇದೀಗ ನಾಪತ್ತೆಯಾಗಿದೆ.</p>.<p>ಪಾರ್ಕಿಂಗ್ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿ, ಫಲಕವನ್ನೇ ಮುಚ್ಚಿದ್ದಾರೆ. ಫಲಕವಿದ್ದರೆ, ಜನರು ಪ್ರಶ್ನಿಸುತ್ತಾರೆಂಬ ಭಯ ಅವರಿಗಿದೆ. ಇದೇ ಫಲಕದ ವಿಚಾರವಾಗಿ ಜನರು ಹಾಗೂ ಸಿಬ್ಬಂದಿ ನಡುವೆ ಜಗಳವಾಗುತ್ತಿರುವ ಘಟನೆಗಳು ನಡೆಯುತ್ತಿವೆ. ವಾಕರಸಾಸಂ ಅಧಿಕಾರಿಗಳೇ, ಫಲಕ ನಿಲ್ಲಿಸಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.</p>.<p><strong>ಅಧಿಕಾರಿಗಳು ಶಾಮೀಲು: ಆರೋಪ</strong></p><p>ಸರ್ಕಾರಿ ಅಧಿಕಾರಿಗಳು, ಶಿಕ್ಷಕರು, ವ್ಯಾಪಾರಿಗಳು, ವಿದ್ಯಾರ್ಥಿಗಳು, ಖಾಸಗಿ ಕಂಪನಿ ಉದ್ಯೋಗಿಗಳು ಸೇರಿದಂತೆ ಹಲವರು ಪಾರ್ಕಿಂಗ್ ವ್ಯವಸ್ಥೆ ಬಳಸುತ್ತಿದ್ದಾರೆ. ಹೆಚ್ಚು ಸಮಯ ಬೈಕ್ ನಿಲ್ಲಿಸುವವರಿಂದ ನಿಗದಿತ ಶುಲ್ಕ ಪಡೆಯಲು ಯಾವುದೇ ಅಭ್ಯಂತರವಿಲ್ಲ. ಆದರೆ, ನಿಮಿಷ ಹಾಗೂ ಕೆಲ ಗಂಟೆಗಳ ಲೆಕ್ಕದಲ್ಲಿ ಬೈಕ್ ನಿಲ್ಲಿಸುವವರಿಂದಲೂ ₹ 24 ಪಡೆಯುವುದು ಯಾವ ನ್ಯಾಯ’ ಎಂದು ಹಾವೇರಿಯ ಮಲ್ಲಿಕಾರ್ಜುನ ಲಕ್ಕಮ್ಮಜ್ಜಪ್ಪನವರ ಪ್ರಶ್ನಿಸಿದರು.</p><p>‘ಪಾರ್ಕಿಂಗ್ ಶುಲ್ಕದ ಹೆಸರಿನಲ್ಲಿ ನಡೆಯುವ ಹಗಲು ದರೋಡೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಗುತ್ತಿಗೆದಾರರಷ್ಟೇ ಅಲ್ಲದೆ, ವಾಕರಸಾಸಂ ಕೆಲ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವ ಅನುಮಾನವಿದೆ. ಅದೇ ಕಾರಣಕ್ಕೆ, ಹಗಲು ದರೋಡೆ ನಡೆಯುತ್ತಿದ್ದರೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿಲ್ಲ. ದೂರು ಕೊಟ್ಟರೂ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.</p>.<p><strong>‘ಶುಲ್ಕ ಕೊಟ್ಟರೂ ಮಾಲೀಕರೇ ಜವಾಬ್ದಾರರು’</strong></p><p>ಪಾರ್ಕಿಂಗ್ ಜಾಗದಲ್ಲಿ ಬೈಕ್ಗಳ ರಕ್ಷಣೆಗಾಗಿ ಸೂಕ್ತ ಕ್ಯಾಮೆರಾ ಹಾಗೂ ಆಧುನಿಕ ಉಪಕರಣಗಳಿಲ್ಲ. ಪಾರ್ಕಿಂಗ್ ಶುಲ್ಕ ಪಡೆಯುವ ಗುತ್ತಿಗೆದಾರ, ‘ವಾಹನಗಳಿಗೆ ಮಾಲೀಕರೇ ಜವಾಬ್ದಾರಿ’ ಎಂದು ಹೇಳಿ ಜಾರಿಕೊಳ್ಳುತ್ತಿರುವುದಾಗಿ ಜನರು ದೂರುತ್ತಿದ್ದಾರೆ.</p><p>‘ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸುವ ವಾಹನಕ್ಕೆ ನಾವೇ ಜವಾಬ್ದಾರಿ ಎಂದರೆ, ಏಕೆ ಶುಲ್ಕ ಕಟ್ಟಬೇಕು. ಶುಲ್ಕ ಪಡೆದ ಗುತ್ತಿಗೆದಾರನ ಜವಾಬ್ದಾರಿ ಏನು?. ವಾಕರಸಾಸಂ ಮೇಲೆ ನಂಬಿಕೆ ಇಟ್ಟು ಬೈಕ್ ನಿಲ್ಲಿಸಿದರೆ, ಯಾರಾದರೂ ಕದ್ದುಕೊಂಡು ಹೋದರೆ ಯಾರು ಹೊಣೆ. ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಸೂಕ್ತ ನೀತಿಯನ್ನು ರೂಪಿಸಬೇಕು. ಬಸ್ ಪ್ರಯಾಣಿಕರ ವಾಹನಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.</p>.<div><blockquote>ಪಾರ್ಕಿಂಗ್ ಹೆಸರಿನಲ್ಲಿ ಹಗಲು ದರೋಡೆ ನಡೆಯುತ್ತಿದ್ದರೂ ವಾಕರಸಾಸಂ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ಮೌನವಾಗಿರುವುದು ವ್ಯವಸ್ಥೆಯನ್ನೇ ಅಣಕಿಸುವಂತಿದೆ </blockquote><span class="attribution"> ಸಂತೋಷ ಮರಂಡಗಿ, ಹಾವೇರಿ ನಿವಾಸಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>